ಬೆಂಗಳೂರು : ಲಘು ಉದ್ಯೋಗ ಭಾರತಿ ಕರ್ನಾಟಕ ಮತ್ತು ಐಎಂಎಸ್ ಫೌಂಡೇಶನ್ ವತಿಯಿಂದ ಸ್ಟಾರ್ಟ್ ಅಪ್ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಾಗೂ ಎಂಎಸ್ಎಂಈ ಯಲ್ಲಿ ತಂತ್ರಜ್ಞಾನದ ಅಳವಡಿಕೆಯ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು “ಟೆಕ್ ಭಾರತ್” ಎಂಬ ಸಮಾವೇಶವನ್ನು ಹಮ್ಮಿಕೊಂಡಿದೆ.
“ಟೆಕ್ ಭಾರತ್”ದ ಎರಡನೇ ಆವೃತ್ತಿಯ ಕಾರ್ಯಕ್ರಮವನ್ನು ಕೋವಿಡ್ 19 ಕಾರಣದಿಂದಾಗಿ ವರ್ಚವಲ್ ನಲ್ಲಿ ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಈ ಬಾರಿಯ ಮುಖ್ಯ ಸಮಾವೇಶ ಮಾರ್ಚ್ 5 ಮತ್ತು 6 ರಂದು ನಡೆಯಲಿದ್ದು ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಎರಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಅದು ಡಿಸೆಂಬರ್ 18 ಮತ್ತು ಜನವರಿ 22 ರಂದು ಅಂತರ್ಜಾಲದ ಮುಖಾಂತರವೇ ನಡೆಯಲಿದೆ. ಡಿಸೆಂಬರ್ 18 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವೈದ್ಯಕೀಯ ಸಚಿವರಾದ ಡಾ. ಸುಧಾಕರ್, IAS ಅಧಿಕಾರಿ ಗೌರವ್ ಗುಪ್ತಾ ಮತ್ತು ಲಘು ಉದ್ಯೋಗ ಭಾರತಿಯ ಮಾರ್ಗದರ್ಶಕರಾದ ಕ್ರಿಸ್ ಗೋಪಾಲಕೃಷ್ಣ ಅವರು ಭಾಗವಹಿಸಿ ಮಾತನಾಡಲಿದ್ದಾರೆ.
ಈ ಬಾರಿಯ “ಟೆಕ್ ಭಾರತ್” ನಲ್ಲಿ Edu-Tech ಹಾಗೂ Health – Tech ಎಂಬ ಎರಡು ವಿಭಾಗಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ಈ ವಿಭಾಗಗಳ ಸ್ಟಾರ್ಟ್ ಅಪ್ಗಳು ಈ ಬಾರಿ ಸಮಾವೇಶದಲ್ಲಿ ಭಾಗಿಯಾಗಲಿವೆ. ಮಾತ್ರವಲ್ಲದೆ ವಿದ್ಯಾಲಯಗಳು, ವೃತ್ತಿಪರ ಸಂಸ್ಥೆಗಳು ಹಾಗೂ ಸರಕಾರವೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಈ ನಾಲ್ಕು ವಿಭಾಗಗಳನ್ನೂ ಜೊತೆಯಾಗಿಸಿ ವಿವಿಧ ವಿಚಾರಗಳ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದ್ದು ಮಾರ್ಚ್ 5 ಮತ್ತು 6 ರಂದು ಈ ವಿಚಾರದ ಕುರಿತಾಗಿ ಗಂಭೀರವಾಗಿ ಚರ್ಚಿಸಲಾಗುತ್ತದೆ.
ಹೆಲ್ತ್ ಕೇರ್ ವಿಭಾಗದಲ್ಲಿ “ಅಸ್ಸಿಸ್ಟಿವ್ ಟೆಕ್ನಾಲಜಿ”ಅಂದರೆ ದಿವ್ಯಾಂಗರಿಗೆ ಅವಶ್ಯವಿರುವ ತಂತ್ರಜ್ಞಾನದ ಸಹಕಾರಗಳನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿರುವ ಸ್ಟಾರ್ಟ್ ಅಪ್ಗಳಿಗೆ ಇಲ್ಲಿ ಅವಕಾಶ ನೀಡಲಾಗುವುದು. ಸಂಸ್ಥೆಯು ಸಾಮಾಜಿಕ ಕಾಳಜಿಯನ್ನು ಹೊಂದಿರುವುದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಸ್ಟಾರ್ಟ್ ಅಪ್ಗಳಿಗೆ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಸುಮಾರು 500 ಸ್ಟಾರ್ಟ್ ಅಪ್ಗಳು ಭಾಗವಹಿಸಲಿದ್ದು, 6000 ದಿಂದ 7000 ಗೌರವನ್ವಿತರು ಮತ್ತು 5000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಎರಡೂ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ, ಸ್ಟಾರ್ಟ್ ಅಪ್ಗಳಿಗೆ 20 ವಿವಿಧ ಚಾಲೆಂಜ್ಗಳನ್ನು ನೀಡುವ ಹ್ಯಾಕಥಾನ್ ನಡೆಸಲಿದ್ದು. ಈ ಸ್ಪರ್ಧೆ ಜನವರಿ 1 ರಿಂದ ಫೆಬ್ರವರಿ ಕೊನೆಯವರೆಗೂ ಜಾರಿಯಲ್ಲಿರಲಿದ್ದು ಉತ್ತಮ ಸ್ಪರ್ಧೆಗಳನ್ನು ಗುರುತಿಸಿ ಪುರಸ್ಕಾರವನ್ನೂ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.
“ಟೆಕ್ ಭಾರತ್” ಕಾರ್ಯಕ್ರಮದ ಮೊದಲನೇ ಆವೃತ್ತಿಯನ್ನು ಕಳೆದ ಜನವರಿ ತಿಂಗಳ 16 ಮತ್ತು 17ನೇ ತಾರೀಕಿನಂದು ಬೆಂಗಳೂರಿನ ತಾಜ್ ಯಶವಂತ್ ಪುರದಲ್ಲಿ ನಡೆಸಲಾಗಿತ್ತು. ಆ ಸಮಾವೇಶದಲ್ಲಿ 600 ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಭಾಗವಹಿಸಲು ಅವಕಾಶವನ್ನು ನೀಡಲಾಗಿತ್ತು.. “ಬ್ಯುಸ್ನೆಸ್ ವಿತ್ ಗವರ್ನಮೆಂಟ್” ಎಂಬ ವಾಕ್ಯದ ಅಡಿಯಲ್ಲಿ ನಡೆಸಲಾದ ಈ ಸಮಾವೇಶದಲ್ಲಿ “ಮೈ gov”, Gov -e market space” ಹಾಗೂ ಕೆಲವು ಖಾಸಗಿ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು ಸಹಕಾರ ನೀಡಲಾಗಿತ್ತು. ಮಾತ್ರವಲ್ಲದೆ ಸ್ಟಾರ್ಟ್ ಅಪ್ಗಳಿಗೆ ಅವಶ್ಯವಾಗಿರುವ ಧನ ಸಹಾಯ ಮತ್ತು ಗೂಗಲ್ ಮಾರ್ಕೆಟಿಂಗ್ನಲ್ಲಿ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು. ಈ ಸಂದರ್ಭದಲ್ಲಿ 40 ಸ್ಟಾರ್ಟ್ ಅಪ್ಗಳಿಗೆ ತಮ್ಮ ಸಂಸ್ಥೆಯನ್ನು ಪ್ರದರ್ಶಿಸುವ ಅವಕಾಶ ನೀಡಿ, ಅತ್ಯುತ್ತಮ 5 ಸ್ಟಾರ್ಟ್ ಅಪ್ಗಳಿಗೆ ಲಘು ಉದ್ಯೋಗ ಭಾರತಿಯ ವತಿಯಿಂದ ಒಂದು ಲಕ್ಷ ರೂಪಾಯಿ ಬಹುಮಾನವನ್ನು ನೀಡಿ ಗುರುತಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.