News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆ. 9 ರಂದು ಕೊಕ್ಕಡದಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ

Belthangady NEWSಬೆಳ್ತಂಗಡಿ : ಹಿಂದೂಗಳ ಮೇಲೆ ಹಲ್ಲೆ, ದರೋಡೆ, ಅತ್ಯಾಚಾರ ಮಾಡುತ್ತಿರುವ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಕೃಪಾ ಕಟಾಕ್ಷದಿಂದ ರಾಜಾರೋಷವಾಗಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಡೋಮಗಿ ಜಾತ್ಯಾತೀತವಾದಿಗಳು ಇದಕ್ಕೆ ಬೆಂಬಲವನ್ನು ನೀಡುತ್ತಿರುವುದನ್ನು ಖಂಡಿಸುವ ಉದ್ದೇಶದಿಂದ ಮತ್ತು ಹಿಂದೂಗಳು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಕೊಕ್ಕಡದಲ್ಲಿ ಆ. 9 ರಂದು ಬೃಹತ್ ಹಿಂದೂ ಜಾಗೃತಿ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹಿಂದೂ ಮುಖಂಡ ಪಿ.ಕುಶಾಲಪ್ಪ ಗೌಡ ತಿಳಿಸಿದರು.ಅವರು ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಮಾವೇಶದ ವಿವರ ನೀಡಿದರು.

ವಿಶ್ವ ಹಿಂದೂ ಪರಿಷತ್ ಕೊಕ್ಕಡ, ಬಜರಂಗ ದಳ ಮತ್ತು ಹಿಂದೂ ಜಾಗರಣ ವೇದಿಕೆ, ಗೋ ರಕ್ಷಾದಳ ಕೊಕ್ಕಡ ವತಿಯಿಂದ ಆ. ೯ ರಂದು ಕೊಕ್ಕಡದ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಮಾವೇಶ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಿಲ್ಲೆಯ ಸರಕಾರದ ಪ್ರತಿನಿಧಿಗಳ ತುಷ್ಠೀಕರಣದ ರಾಜಕಾರಣದಿಂದ ಹಿಂದೂ ಕಾರ್ಯಕರ್ತರು ಭಯಭೀತರಾಗಿ ಬದುಕಬೇಕಾದ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳ ಗೋಶಾಲೆಯ ಗೋವುಗಳನ್ನು ದನಗಳ್ಳ ಗೂಂಡಾಗಳಿಂದ ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಸರಕಾರದ ಕುಮ್ಮಕ್ಕಿನ್ನಿಂದ ನಿರಪರಾಧಿ ಹಿಂದೂ ಕಾರ್ಯಕರ್ತರನ್ನು ಜೈಲಿಗಟ್ಟುವ ಕಾರ್ಯಗಳಾಗುತ್ತಿವೆ ಎಂದರು.

ಕೊಕ್ಕಡದ ಘಟನೆಯಲ್ಲಿ ನಿರಪರಾಧಿಗಳನ್ನು ಬಂಧಿಸಿ ನಿಜವಾದ ಅಪರಾಧಿಗಳಿಗೆ ರಕ್ಷಣೆಯನ್ನು ನೀಡಲಾಗಿದೆ. ಇದರಿಂದ ಷಡ್ಯಂತ್ರ ಮತ್ತು ಕೆಲ ರಾಜಕಾರಣಿಗಳ ಕೃಪಾಕಟಾಕ್ಷವಿದೆ. ಹಲವಾರು ಬಾರಿ ಶಾಲೆಗೆ ಹೋಗುವ ಹಿಂದೂ ಹೆಣ್ಣು ಮಕ್ಕಳನ್ನು ಪೀಡಿಸುತ್ತಿದ್ದಾತನನ್ನು ಮಾನಸಿಕ ರೋಗಿ ಎಂದು ಬಿಂಬಿಸಿ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆ. ಇದರಿಂದ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ.

ಸಮಾವೇಶದಲ್ಲಿ ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನ ಒಂದು ಸಾವಿರಕ್ಕೂ ಹೆಚ್ಚು ಹಿಂದೂಗಳು ಸೇರಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾವೇಶದಲ್ಲಿ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತ ಸಂಚಾಲಕ ಜಗದೀಶ ಕಾರಂತ ದಕ್ಸೂಚಿ ಭಾಷಣ ಮಾಡಿಲಿದ್ದಾರೆ. ಬೆಳ್ತಂಗಡಿಯ ವಕೀಲ ಸುಬ್ರಹ್ಮಣ್ಯಕುಮಾರ್ ಅಗರ್ತ ಅತಿಥಿಗಳಾಗಿರುತ್ತಾರೆ. ಅನ್ಯರಿಂದ ದಾಳಿಗೊಳಗಾಗುವ ಸಂದರ್ಭದಲಿ ಹಿಂದೂಗಳು ಸಂಘಟಿತರಾಗಿರುವಂತೆ ಮಾಡುವುದಲ್ಲದೆ ಹಿಂದೂಗಳು ತಮ್ಮಲ್ಲಿರುವ ಕೀಳರಿಮೆಗಳನ್ನು ಹೋಗಲಾಡಿಸುವ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು.

ಗೋಷ್ಠಿಯಲ್ಲಿ ಕೊಕ್ಕಡ ವಿ.ಹಿಂ.ಪ.ದ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಸಹಕಾರ್ಯದರ್ಶಿ ಬಾಲಕೃಷ್ಣ ಬಳಕ್ಕ, ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಇದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top