ಹಂಪಿ: ಇತಿಹಾಸ ಪ್ರಸಿದ್ಧ ಹಂಪಿಯ ಸ್ಮಾರಕಗಳನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವೊಂದಕ್ಕೆ ಭಾರತೀಯ ಪುರಾತತ್ವ ಇಲಾಖೆ ಮುಂದಡಿ ಇಟ್ಟಿದೆ.
ವಿಜಯನಗರದ ಗತ ವೈಭವವನ್ನು ಸಾರುವ ಸ್ಮಾರಕಗಳನ್ನು ರಕ್ಷಿಸುವ ಸಲುವಾಗಿ ಪುರಾತತ್ವ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಅದರಲ್ಲೂ ವಿಜಯ ವಿಠ್ಠಲ ದೇಗುಲದಲ್ಲಿರುವ ಕಲ್ಲಿನ ರಥವನ್ನು ಉಳಿಸಿ, ಸಂರಕ್ಷಿಸುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಂಪಿಗೆ ಆಗಮಿಸುವ ಸಾವಿರಾರು ಪ್ರವಾಸಿಗರು ಕಲ್ಲಿನ ರಥ ಸೇರಿದಂತೆ ಇನ್ನಿತರ ಸ್ಮಾರಕಗಳನ್ನು ಮುಟ್ಟುತ್ತಿದ್ದು, ಅವರನ್ನು ನಿಭಾಯಿಸುವುದೇ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಪುರಾತತ್ವ ಇಲಾಖೆ ಹೊರಡಿಸಿದೆ.
ಮುಂದಿನ ಪೀಳಿಗೆಗೂ ಉಳಿಸುವ, ವೀಕ್ಷಿಸಲು ಸಿಗುವಂತೆ ಮಾಡುವ ಸಲುವಾಗಿ ದೇಗುಲದಲ್ಲಿನ ಕಲ್ಲಿನ ರಥವನೀ ಮುಟ್ಟುವುದನ್ನು ನಿಷೇಧಿಸಿ ಇಲಾಖೆ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಥದ ಸುತ್ತಲೂ ಕಬ್ಬಿಣದ ಸರಪಳಿಯನ್ನು ಅಳವಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.