ಬೆಂಗಳೂರು: ಡಿಸ್ಟೆನ್ಸ್ ಎಜುಕೇಶನ್ ಪದ್ಧತಿಯನ್ನು ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ ಮಾತ್ರ ಸೀಮಿತಗೊಳಿಸುವ, ಬೆಂಗಳೂರು ವಿವಿ ಹೆಸರು ಬದಲಾವಣೆ ಸೇರಿದಂತೆ ಉನ್ನತ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ಸಂಬಂಧಿಸಿದಂತಿರುವ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು ನಿನ್ನೆ ಅಧಿವೇಶನದಲ್ಲಿ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಸುಧಾರಣೆಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ವಿವಿ ಗಳ ಮತ್ತು ಇತರ ಕೆಲವು ಕಾನೂನುಗಳ (ಎರಡನೇ ತಿದ್ದುಪಡಿ) ವಿಧೇಯಕ-2020 ಯನ್ನು ಮಂಡಿಸಿದರು.
ಈ ವಿಧೇಯಕದಲ್ಲಿ ಬೆಂಗಳೂರು ವಿವಿಯಿಂದ ಬೆಂಗಳೂರಿನಲ್ಲಿರುವ ಸರ್ಕಾರಿ ಸೈನ್ಸ್ ಕಾಲೇಜು ಸಂಸ್ಥೆಯನ್ನು ಏಕಾತ್ಮಕ ಸ್ವರೂಪದ ನೃಪತುಂಗ ವಿವಿ ಎಂದು ನಾಮಕರಣ ಮಾಡುವುದು, ಕೇವಲ ಮೈಸೂರು ವಿವಿ ಯಲ್ಲಷ್ಟೇ ದೂರ ಶಿಕ್ಷಣ ಸೌಲಭ್ಯಕ್ಕೆ ಅವಕಾಶ ಕಲ್ಪಿಸುವುದು, ಬೆಂಗಳೂರು ಕೇಂದ್ರ ವಿವಿ ಯನ್ನು ‘ಬೆಂಗಳೂರು ನಗರ ವಿವಿ’ ಯಾಗಿ ಮರುನಾಮಕರಣ ಮಾಡುವುದು ಸೇರಿದಂತೆ ಇನ್ನಿತರ ಮಹತ್ವದ ಅಂಶಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.