News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೀರು ಸರಬರಾಜಿನ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚಿಸಲಿ

BJPಮಂಗಳೂರು : ಕೆ ಕಳೆದ ಶನಿವಾರದಿಂದ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಉಂಟಾಗಿದ್ದು, ಇದರಿಂದ ಮಂಗಳೂರಿನ ಜನತೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ ಆದ ಕಷ್ಟ ಹೇಳಲು ಅಸಾಧ್ಯ. ಈ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ನೀರಿನ ಮೂಲ ಮತ್ತು ಸರಬರಾಜಿನ ಕೊಳವೆ ಹಾದು ಬರುವ ಸ್ಥಳ ಕೊಳವೆಗಳ ಅಳವಡಿಕೆ ಕುಡ್ಸೆಂಪ್ ಮುಖಾಂತರ ನಡೆದಿರುವಾಗ ಆಗಿನ ಮಹಾನಗರಪಾಲಿಕೆಯ ಮುಖ್ಯ ಅಧಿಕಾರಿ ಈಗಿನ ಶಾಸಕರಾದ ಶ್ರೀ ಜೆ.ಆರ್.ಲೋಬೋ ಅವರು ಅಧಿಕಾರದಲ್ಲಿದ್ದರು. ಸರಕಾರದ 360 ಕೋಟಿ ರೂಪಾಯಿಯಲ್ಲಿ ಕುಡ್ಸೆಂಪ್ ಯೋಜನೆಯ ಮುಖಾಂತರ 120 ಕೋಟಿ ರೂಪಾಯಿಯನ್ನು2002 ರಿಂದ 2007ರ ಒಳಗಾಗಿ ನೀರಿನ ಸರಬರಾಜಿಗೆ ವಿನಿಯೋಗಿಸಿ ಕ್ರಮಬದ್ಧವಾಗಿ ಕೆಲಸಕಾರ್ಯಗಳನ್ನು ಮಾಡಬೇಕಿತ್ತು ಎಂದು ಬಿಜೆಪಿ ಹೇಳಿದೆ.

ಆದರೆ ತುಂಬೆಯಿಂದ ಬರುವ ನೀರಿನ ಪೈಪ್ ಲೈನ್‌ಗಳು ಅವೈಜ್ಞಾನಿಕವಾಗಿ ಖಾಸಗೀ ಭೂಮಿಯಲ್ಲಿ ಅಳವಡಿಸಿಕೊಂಡು ಬರುವಾಗ ಪೈಪ್ ಲೈನ್‌ಗಳನ್ನು ಭೂಮಿಯ ಮಟ್ಟಕ್ಕಿಂತ ಸುಮಾರು 5 ಅಡಿ ಎತ್ತರದ ಕಂಬಗಳನ್ನು ನಿರ್ಮಿಸಿ ಹಾಕಬೇಕಿತ್ತು. ಅದೇನನ್ನು ಮಾಡದೆ ಭೂಮಿಯ ಮೇಲೆ ಪೈಪ್‌ಗಳನ್ನು ಇಟ್ಟು ಅದರ ಮೇಲೆ ಖಾಸಗೀ ಭೂಮಾಲಕರು, ಹೊರವಲಯದ ಮಣ್ಣನ್ನು ಪೈಪ್‌ನ ಮೇಲೆ ಹಾಕಿದರ ಪರಿಣಾಮ ಪೈಪ್‌ಗಳು ಒಡೆದು ದುಸ್ತರಗೊಂಡಿದ್ದರಿಂದ ಜನರು ಈ ಮಳೆಗಾಲದಲ್ಲಿ ನೀರಿಗಾಗಿ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಇದಕ್ಕೆ ಕಾಂಗ್ರೆಸ್ ಸರಕಾರ ಮತ್ತು ಮಹಾನಗರಪಾಲಿಕೆ ಸಂಪೂರ್ಣ ಜವಾಬ್ದಾರರು. ಇಂತಹ ಬೇಜವಾಬ್ದಾರಿ ವರ್ತನೆಯು ಮುಂದಕ್ಕೆ ನಡೆಯಬಾರದು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಪ್ರಕ್ಷ ನಡೆಸುತ್ತಿರುವ ಮಂಗಳೂರು ಮಹಾನಗರಪಾಲಿಕೆ ಈ ಬಗ್ಗೆ ಎಚ್ಚರವಹಿಸಿ ಮಹಾ ಜನತೆಗೆ ಆದ ಅನಾನುಕೂಲಕ್ಕೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಆಗ್ರಹಿಸುತ್ತದೆ ಎಂದು ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಹೇಳಿಕೆ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top