ಮೈಸೂರು: ರಾಜ್ಯದ ಅರಣ್ಯ ಇಲಾಖೆ ಮೈಸೂರಿನಲ್ಲಿ ಶ್ರೀಗಂಧದ ಮ್ಯೂಸಿಯಂ ಅನ್ನು ಸ್ಥಾಪಿಸಿದೆ.
ಮೈಸೂರಿನ ಅರಣ್ಯ ವಿಭಾಗದ ಕಚೇರಿಯ ಸಮೀಪದಲ್ಲಿರುವ ಸ್ಯಾಂಡಲ್ವುಡ್ ಡಿಪಾರ್ಟ್ಮೆಂಟ್ ಪ್ರದೇಶದಲ್ಲಿ ಈ ಮ್ಯೂಸಿಯಂ ಅನ್ನು ಆರಂಭಿಸಲಾಗಿದೆ. ಇದರಲ್ಲಿ ದೇಶದ ವಿವಿಧ ಭಾಗಗಳ ಸುಮಾರು 20 ರಷ್ಟು ವಿಧದ ಶ್ರೀಗಂಧವನ್ನು ಕಾಣಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮ್ಯೂಸಿಯಂನಲ್ಲಿ ಕರ್ನಾಟಕ ಸೋಪು ಮತ್ತು ಡಿಟರ್ಜೆಂಟ್ ಲಿ., ಕರ್ನಾಟಕ ರಾಜ್ಯ ಕಲಾ ಆರ್ಟ್ಸ್ ಆಂಡ್ ಕ್ರಾಫ್ಟ್ ಎಂಪೋರಿಯಂ ಮತ್ತು ಇತರ ಖಾಸಗಿ ಸಂಸ್ಥೆಗಳ ವಸ್ತು ಪ್ರದರ್ಶನ ಸಹ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 3 ಡಿ ಮಾದರಿಯ ಮರದ ಟ್ರಂಕ್, ಅರಣ್ಯ ಇಲಾಖೆ ಸಂಗ್ರಹಿಸಿರುವ ಶ್ರೀಗಂಧದ ವಸ್ತುಗಳ ಪ್ರದರ್ಶನ ಈ ಮ್ಯೂಸಿಯಂನಲ್ಲಿ ನಡೆಯಲಿದೆ.
ಇವೆಲ್ಲವೂ ಹೆಚ್ಚು ಬೆಲೆಬಾಳುವ ಹಿನ್ನೆಲೆಯಲ್ಲಿ ಈ ಮ್ಯೂಸಿಯಂಗೆ ಭದ್ರತಾ ದೃಷ್ಟಿಯಿಂದ 24 ಗಂಟೆಗಳ ಕಾಲ ಸೆಕ್ಯೂರಿಟಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯವನ್ನು ಸ್ಯಾಂಡಲ್ವುಡ್ ರಾಜ್ಯ ಎಂದು ಕರೆಯಲಾಗುವ ಹಿನ್ನೆಲೆಯಲ್ಲಿಯೂ ಈ ಮ್ಯೂಸಿಯಂ ಮುಖ್ಯವಾಗಲಿದೆ. ಈ ಮ್ಯೂಸಿಯಂ ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲವಾದರೂ ಡಿ. 1 ರಿಂದ ಇದನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀಗಂಧದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಮತ್ತು ಅದರ ಪ್ರಬೇಧಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಮ್ಯೂಸಿಯಂ ಮುಖ್ಯವಾಗಲಿದೆ ಎಂಬ ಅಭಿಪ್ರಾಯ ಅಧಿಕಾರಿಗಳದ್ದು. ಇನ್ನು ಈ ಮ್ಯೂಸಿಯಂ ಸ್ಥಾಪನೆಗೆ ಅರಣ್ಯ ಇಲಾಖೆ 2 ವರ್ಷಗಳ ಅವಧಿಯನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.