ನವದೆಹಲಿ: ಕ್ರಿಶ್ಚಿಯನ್, ಯಹೂದಿ ಮತ್ತು ಇಸ್ಲಾಂ ಧರ್ಮದ ವಿರುದ್ಧದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆ, ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಸಿಖ್ ಧರ್ಮದ ವಿರುದ್ಧ ಏರುತ್ತಿರುವ ದ್ವೇಷ ಮತ್ತು ಹಿಂಸಾಚಾರವನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ʼಸೆಲೆಕ್ಟಿವ್ ಖಂಡನೆʼಯನ್ನು ಭಾರತ ದಿಟ್ಟವಾಗಿ ಪ್ರಶ್ನೆ ಮಾಡಿದೆ.
“ಯಹೂದಿ ವಿರೋಧಿ, ಇಸ್ಲಾಮೋಫೋಬಿಯಾ ಮತ್ತು ಕ್ರಿಶ್ಚಿಯನ್ ವಿರೋಧಿ ಕೃತ್ಯಗಳನ್ನು ಭಾರತ ದೃಢವಾಗಿ ಖಂಡಿಸುತ್ತದೆ. ಆದರೆ ವಿಶ್ವಸಂಸ್ಥೆಯ ಈ ಬಗೆಗಿನ ಪ್ರಮುಖ ವಿಷಯಗಳ ಕುರಿತ ನಿರ್ಣಯಗಳು ಮೂರು ಅಬ್ರಹಾಮಿಕ್ ಧರ್ಮಗಳ ಬಗ್ಗೆ ಮಾತ್ರ ಮಾತನಾಡುತ್ತದೆ. ಬೌದ್ಧಧರ್ಮ, ಹಿಂದೂ ಧರ್ಮ ಮತ್ತು ಸಿಖ್ ಧರ್ಮದ ವಿರುದ್ಧದ ದ್ವೇಷ ಮತ್ತು ಹಿಂಸಾಚಾರವನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವಿಫಲವಾಗಿದೆ’ ಎಂದು ನ್ಯೂಯಾರ್ಕ್ನಲ್ಲಿ ಯುಎನ್ನ ಭಾರತದ ಶಾಶ್ವತ ಮಿಷನ್ನ ಮೊದಲ ಕಾರ್ಯದರ್ಶಿ ಆಶಿಶ್ ಶರ್ಮಾ ಹೇಳಿದ್ದಾರೆ.
2009ರಲ್ಲಿ ಭಾರತೀಯ ವಿದೇಶಿ ಸೇವೆಗೆ (ಐಎಫ್ಎಸ್) ಸೇರ್ಪಡೆಗೊಂಡ ಶರ್ಮಾ ಅವರು ಬುಧವಾರ ನ್ಯೂಯಾರ್ಕ್ನ ಯುಎನ್ಜಿಎದಲ್ಲಿ ‘ಶಾಂತಿ ಸಂಸ್ಕೃತಿ’ ಕುರಿತ ಸಮಾವೇಶದಲ್ಲಿ ಭಾರತ ಸರ್ಕಾರದ ಪರವಾಗಿ ಹೇಳಿಕೆ ನೀಡಿದರು.
“ಈ ಸೆಲೆಕ್ಟಿವ್ ಖಂಡನೆ ಏಕೆ? ಹಿಂದೂ ಧರ್ಮವು 1.2 ಬಿಲಿಯನ್ಗಿಂದ ಹೆಚ್ಚು, ಬೌದ್ಧಧರ್ಮವು 535 ಮಿಲಿಯನ್ ಮತ್ತು ಸಿಖ್ ಧರ್ಮವು ಸುಮಾರು 30 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಧರ್ಮಗಳ ವಿರುದ್ಧದ ದಾಳಿಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವಾಗ (ಯುಎನ್) ಮೂರು ಅಬ್ರಹಾಮಿಕ್ ಧರ್ಮಗಳ ಪಟ್ಟಿಗೆ ಈ ಧರ್ಮಗಳನ್ನು ಕೂಡ ಸೇರಿಸುವ ಸಮಯ ಬಂದಿದೆ” ಎಂದು ಅವರು ಹೇಳಿದರು.
ಸೆಲೆಕ್ಟಿವ್ ಖಂಡನೆ ಇರುವವರೆಗೆ ಶಾಂತಿಯ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ ಎಂದು ಆಶಿಶ್ ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.