ಜೋಧ್ಪುರ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ದೇಶದಲ್ಲಿ ಈ ವರ್ಷ ಏಳು ಲಕ್ಷ ಜಲಮೂಲಗಳನ್ನು ಪುನಃಶ್ಚೇತನಗೊಳಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬುಧವಾರ ಹೇಳಿದ್ದಾರೆ.
ಅಂತಹ 4.52 ಲಕ್ಷ ಜಲಮೂಲಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಜಲಮೂಲಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಪುಣೆಯ ಎಂಐಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿ ನಡೆಸಿದ “ರಾಷ್ಟ್ರೀಯ ಸರಪಂಚ್ ಸಂಸದ್” ಎಂಬ ವೆಬ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶೇಖಾವತ್ ಅವರು, ದೇಶದ ಜಲಮೂಲಗಳ ಪುನಃಸ್ಥಾಪನೆಯ ಕಾರ್ಯಗಳ ಕುರಿತು ಮಾತನಾಡಿದರು.
ಉದಯಪುರದಿಂದ ಈ ಕಾರ್ಯಕ್ರಮವನ್ನು ಡಿಜಿಟಲ್ ರೂಪದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಇದು ದೇಶದ ಮಣ್ಣಿನೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ ಕಾರ್ಯಕ್ರಮ ಎಂದು ಬಣ್ಣಿಸಿದರು.
ಒಬ್ಬ ವ್ಯಕ್ತಿ, ಒಂದು ಸಂಸ್ಥೆ, ಒಂದು ಗುಂಪು, ಗ್ರಾಮ ಪಂಚಾಯಿತಿಗಳು, ಸಾರ್ವಜನಿಕ ಪ್ರತಿನಿಧಿಗಳು ಅಥವಾ ಸರ್ಕಾರವು ಸ್ವಂತವಾಗಿ ಶ್ರಮಿಸಿ ತಮ್ಮ ಹಳ್ಳಿ ಅಥವಾ ಪ್ರದೇಶದ ನೀರಿನ ಏಳಿಗೆಗೆ ಯಶಸ್ಸನ್ನು ಗಳಿಸಿದ ಅನೇಕ ಉದಾಹರಣೆಗಳಿವೆ ”ಎಂದು ಶೇಖಾವತ್ ಗ್ರಾಮ ಸರಪಂಚ್ಗಳ ಪಾತ್ರವನ್ನು ಶ್ಲಾಘಿಸುತ್ತಾ ಹೇಳಿದರು.
ಒಂದು ಹಳ್ಳಿಯು ನೀರಿನ ಸಮೃದ್ಧಿ ಪಡೆದಾಗ ಅದು ಕೇವಲ ನೀರಿನ ಸ್ವಾವಲಂಬನೆ ಪಡೆಯುವುದಲ್ಲದೇ, ಆ ಪ್ರದೇಶದ ಸಂಪೂರ್ಣ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.