ಅಯೋಧ್ಯೆ: ಅಯೋಧ್ಯೆಯ ಸರಯು ನದಿಯಲ್ಲಿ ‘ರಾಮಾಯಣ ಕ್ರೂಸ್ ಪ್ರವಾಸ’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಂದರು ಸೇವೆ, ಹಡಗು ಮತ್ತು ಜಲಮಾರ್ಗಗಳ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಂದು ಕ್ರೂಸ್ ಸೇವೆಯ ಅನುಷ್ಠಾನಕ್ಕಾಗಿ ಪರಿಶೀಲನಾ ಸಭೆ ನಡೆಸಿದರು.
ಇದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸರಯು ನದಿಯಲ್ಲಿ ಇದು ಮೊಟ್ಟಮೊದಲ ಐಷಾರಾಮಿ ಕ್ರೂಸ್ ಸೇವೆಯಾಗಲಿದೆ. ಪವಿತ್ರ ಸರಯು ನದಿಯ ಪ್ರಸಿದ್ಧ ಘಟ್ಟಗಳ ಮೂಲಕ ಪ್ರಯಾಣ ಮಾಡುವ ಭಕ್ತರಿಗೆ ಒಂದು ರೀತಿಯ ಆಧ್ಯಾತ್ಮಿಕ ಪ್ರಯಾಣದೊಂದಿಗೆ ಮೋಡಿ ಮಾಡುವ ಅನುಭವವನ್ನು ನೀಡುವ ಗುರಿಯನ್ನು ಇದು ಹೊಂದಿದೆ.
ಕ್ರೂಸ್ನಲ್ಲಿ ಎಲ್ಲಾ ಐಷಾರಾಮಿ ಸೌಕರ್ಯ ಮತ್ತು ಸೌಲಭ್ಯಗಳು ಮತ್ತು ಎಲ್ಲಾ ಅಗತ್ಯ ಸುರಕ್ಷತೆ ಮತ್ತು ಭದ್ರತಾ ವೈಶಿಷ್ಟ್ಯಗಳು ಇದ್ದು, ಇದು ಜಾಗತಿಕ ಗುಣಮಟ್ಟಕ್ಕೆ ಸಮನಾಗಿರುತ್ತದೆ. ಕ್ರೂಸ್ ಮತ್ತು ಬೋರ್ಡಿಂಗ್ ಪಾಯಿಂಟ್ನ ಒಳಾಂಗಣಗಳು ರಾಮಚರಿತೆಯ ವಿಷಯವನ್ನು ಆಧರಿಸಿವೆ. ಸಂಪೂರ್ಣ ಹವಾನಿಯಂತ್ರಿತ 80 ಆಸನಗಳು ವಿಹಾರ ಘಟ್ಟದ ರಮಣೀಯ ಸೌಂದರ್ಯವನ್ನು ಅನುಭವಿಸಲು ದೊಡ್ಡ ಗಾಜಿನ ಕಿಟಕಿಗಳನ್ನು ಹೊಂದಿರುತ್ತದೆ. ವಿಹಾರಕ್ಕೆ ಪ್ರವಾಸಿಗರ ಅನುಕೂಲಕ್ಕಾಗಿ ಅಡುಗೆಮನೆ ಮತ್ತು ಪ್ಯಾಂಟ್ರಿ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ.
ಕ್ರೂಸ್ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರಲಾರದು, ಇದು ಜೈವಿಕ ಶೌಚಾಲಯಗಳು ಮತ್ತು ಹೈಬ್ರಿಡ್ ಎಂಜಿನ್ ವ್ಯವಸ್ಥೆಗಳನ್ನು ಒಳಗೊಂಡಿದೆ.
ಪ್ರವಾಸಿಗರನ್ನು 1-1.5 ಗಂಟೆಗಳ ಅವಧಿಯಲ್ಲಿ ‘ರಾಮಚರಿತ ಮಾನಸ ಪ್ರವಾಸ’ಕ್ಕೆ ಕರೆದೊಯ್ಯಲಾಗುವುದು, ಗೋಸ್ವಾಮಿ ತುಳಸಿದಾಸ್ ಅವರ ರಾಮ ಚರಿತ ಮಾನಸ ಆಧಾರಿತ 45-60 ನಿಮಿಷಗಳ ಅವಧಿಯ ಪ್ರತ್ಯೇಕವಾಗಿ ನಿರ್ಮಿಸಲಾದ ವಿಡಿಯೋ ಫಿಲ್ಮ್ ಅನ್ನು ಇದು ಒಳಗೊಂಡಿದ್ದು, ಭಗವಾನ್ ರಾಮನ ಹುಟ್ಟಿನಿಂದ ಹಿಡಿದು ಅವರ ರಾಜ್ಯಾಭಿಷೇಕದವರೆಗಿನ ಅವಧಿಯನ್ನು ಒಳಗೊಂಡಿದೆ. ಇಡೀ ಪ್ರವಾಸವು ಸುಮಾರು 15-16 ಕಿ.ಮೀ ದೂರವನ್ನು ಒಳಗೊಂಡಿರುತ್ತದೆ. ರಾಮಾಯಣದ ವಿವಿಧ ಆಯಾಮಗಳಿಂದ ಪ್ರೇರಿತವಾದ ಹಲವಾರು ಚಟುವಟಿಕೆಗಳು ಮತ್ತು ಸೆಲ್ಫಿ ಪಾಯಿಂಟ್ಗಳು ಇರುತ್ತವೆ. ಪ್ರವಾಸದ ನಂತರ ಸರಯು ನದಿಯಲ್ಲಿ ಆರತಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.