ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಕಾರ್ತಿಕ ಪೂರ್ಣಿಮೆ ಅಥವಾ ದೇವ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅಯೋಧ್ಯೆಯ ಸರಯೂ ನದಿಯ ತಟದಲ್ಲಿನ ರಾಮ್ ಕಿ ಪೈಡಿ ಯಲ್ಲಿ ಭಕ್ತರು ಸುಮಾರು 51,000 ಮಣ್ಣಿನ ಹಣತೆಗಳನ್ನು ಬೆಳಗಿ ದೇವ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಕಾರ್ತಿಕ ದೀಪಾವಳಿಯಂದು ಜನರು ಕಾರ್ತಿಕ ಸ್ನಾನವನ್ನು ಪವಿತ್ರ ಎಂದು ನಂಬಿದ್ದು, ಬಹಳ ಹಿಂದಿನಿಂದಲೂ ಈ ಆಚರಣೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಜೊತೆಗೆ ತಮ್ಮ ತಮ್ಮ ಮನೆಗಳನ್ನು ಹಣತೆಗಳನ್ನು ಹಚ್ಚಿ ಅಲಂಕಾರ ಮಾಡುವುದು, ರಾಮ, ವಿಷ್ಣು, ಶಿವ ಮೊದಲಾದ ದೇವರುಗಳಿಗೆ ಪೂಜೆ ಸಲ್ಲಿಸುವುದು ಮೊದಲಾದ ಕ್ರಮಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯ ಅಯೋಧ್ಯೆಯಲ್ಲಿ ಕಾರ್ತಿಕ ಪೂರ್ಣಿಮೆಯಂದು ಪ್ರತಿ ವರ್ಷವೂ ಕಂಡು ಬರುವ ದೃಶ್ಯಗಳಾಗಿವೆ.
ಈ ಆಚರಣೆಯ ಹಿನ್ನೆಲೆಯಲ್ಲಿ ಭಕ್ತರು ಉಪವಾಸ ವ್ರತಗಳನ್ನು ಆಚರಣೆ ಮಾಡುವುದು, ರಾಮ ನಾಮ ಜಪ, ಪೂಜೆಗಳಲ್ಲಿಯೂ ತೊಡಗಿಸಿಕೊಳ್ಳುವುದನ್ನು ಗಮನಿಸಬಹುದಾಗಿದೆ. ಕಾರ್ತಿಕ ಪೂರ್ಣಿಮೆಯು ಪ್ರಬೋಧಿನಿ ಏಕಾದಶಿಯೊಂದಿಗೆ ಸಂಬಂಧ ಹೊಂದಿದ್ದು, ಈ ಸಮಯದಲ್ಲಿ ಭಗವಾನ್ ವಿಷ್ಣು ಧ್ಯಾನದಲ್ಲಿರುವನೆಂಬ ನಂಬಿಕೆಯೂ ಭಕ್ತಸಾಗರದಲ್ಲಿದೆ. ನಿನ್ನೆ ಮಧ್ಯಾಹ್ನದಿಂದ ಆರಂಭವಾಗಿರುವ ಕಾರ್ತಿಕ ಹುಣ್ಣಿಮೆಯ ಆಚರಣೆ ಇಂದು ಮಧ್ಯಾಹ್ನದ ವೇಳೆಗೆ ಸಮಾಪ್ತಿಯಾಗಲಿದ್ದು, ದೇವರ ದೀಪಾವಳಿಯಲ್ಲಿ ಭಕ್ತರು ಮಿಂದೇಳುತ್ತಿದ್ದಾರೆ.
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕರ ಜನ್ಮದಿನವಾಗಿದ್ದು, ಕಾರ್ತಿಕ ಪೂರ್ಣಿಮೆಯು ಸಿಖ್ಖರಿಗೆ ಬಹಳ ಮಹತ್ವದ ದಿನವೂ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.