ನವದೆಹಲಿ: ಈಗ ಭಾರತ ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೇ, “ಒಂದು ದೇಶ, ಒಂದು ಚುನಾವಣೆ” ಕೇವಲ ಚರ್ಚೆಯ ವಿಷಯವಲ್ಲ, ಬದಲಿಗೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಗುಜರಾತ್ನ ಕೆವಾಡಿಯಾದಲ್ಲಿ ಇಂದು ನಡೆದ 80ನೇ ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, 26/11 ಭಯೋತ್ಪಾದಕ ದಾಳಿಯ ಗಾಯಗಳನ್ನು ಭಾರತ ಮರೆಯಲು ಸಾಧ್ಯವಿಲ್ಲ. 2008 ರಲ್ಲಿ ಈ ದಿನ ಪಾಕಿಸ್ಥಾನದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದರು, ಇದರಲ್ಲಿ ವಿದೇಶಿ ನಾಗರಿಕರು ಮತ್ತು ಪೊಲೀಸರು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ತಿಂಗಳುಗಟ್ಟಲೆ ದೇಶದ ಒಂದೊಂದು ಭಾಗದಲ್ಲಿ ಚುನಾವಣೆ ನಡೆದರೆ ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ. ಹೀಗಾಗಿ ʼಒಂದು ದೇಶ, ಒಂದು ಚುನಾವಣೆʼ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯ ಸಂವಿಧಾನವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಅದರ ವಿಶೇಷ ಲಕ್ಷಣವೆಂದರೆ ಕರ್ತವ್ಯಗಳ ಮಹತ್ವ. ಗಾಂಧಿಜಿ ಹಕ್ಕುಗಳು ಮತ್ತು ಕರ್ತವ್ಯಗಳ ನಡುವೆ ನಿಕಟ ಸಂಬಂಧವನ್ನು ಕಂಡಿದ್ದರು ಮತ್ತು ಒಮ್ಮೆ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಹಕ್ಕುಗಳು ಸ್ವಯಂಚಾಲಿತವಾಗಿ ಕಾಪಾಡಲ್ಪಡುತ್ತದೆ ಎಂದು ಅವರು ಹೇಳಿದರು.
ನಮ್ಮ ಸಂವಿಧಾನದಿಂದ ನಮಗೆ ಶಕ್ತಿ ಸಿಕ್ಕಿದೆ, ಇದು ಅನೇಕ ತೊಂದರೆಗಳನ್ನು ಪರಿಹರಿಸಲು ಸಹಾಯ ಮಾಡಿದೆ. ಎಪ್ಪತ್ತರ ದಶಕದಲ್ಲಿ ಸಂವಿಧಾನದ ಅಧಿಕಾರವನ್ನು ಉಲ್ಲಂಘಿಸುವ ಪ್ರಯತ್ನಗಳನ್ನು ನಾವು ನೋಡಿದ್ದೇವೆ, ಆದರೆ ಅದಕ್ಕೆ ಪರಿಹಾರವೂ ಸಂವಿಧಾನದಿಂದಲೇ ಬಂದಿತು. ತುರ್ತು ಪರಿಸ್ಥಿತಿಯ ನಂತರ ಪರಿಶೀಲನೆ ಮತ್ತು ಸಮತೋಲನದ ವ್ಯವಸ್ಥೆಯು ಬಲಗೊಳ್ಳುತ್ತಾ ಬಂದಿತು ಎಂದು ಮೋದಿ ಹೇಳಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲೂ ನಮ್ಮ ಸಮರ್ಥ ಚುನಾವಣಾ ಪ್ರಕ್ರಿಯೆಗೆ ಜಗತ್ತು ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕರೋನವೈರಸ್ ವಿರುದ್ಧ ಹೋರಾಡುವಲ್ಲಿ 130 ಕೋಟಿ ಜನರು ತಮ್ಮ ಪ್ರಬುದ್ಧತೆಯನ್ನು ತೋರಿಸಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.