ಶ್ರೀನಗರ: ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯ್ಬಾ ನಡೆಸಿದ ಭೀಕರ 26/11 ಮುಂಬೈ ಭಯೋತ್ಪಾದಕ ದಾಳಿಯ 12 ನೇ ವಾರ್ಷಿಕೋತ್ಸವ ಇಂದು. ಈ ಸಂದರ್ಭದಲ್ಲಿ ಇಡೀ ದೇಶವೇ ಕರಾಳ ಘಟನೆಯನ್ನು ನೆನೆದು ಅಗಲಿದ ನಾಗರಿಕರಿಗೆ, ವೀರರಿಗೆ ಶ್ರದ್ಧಾಂಜಲಿ ಅರ್ಪಣೆ ಮಾಡುತ್ತಿದೆ.
ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲೂ ಕೂಡ ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವ ಪಾಕಿಸ್ಥಾನದ ವಿರುದ್ಧ ಹೋರ್ಡಿಂಗ್ಗಳು ಕಂಡುಬಂದಿವೆ.
ʼಕರುಣೆ ತೋರದ ನಿನ್ನನ್ನು, ನಮ್ಮನ್ನು ತುಂಡರಿಸಲು ಪ್ರಯತ್ನಿಸಿದ ನಿನ್ನನ್ನು, ನಮ್ಮನ್ನು ಅಸಾಯಕರನ್ನಾಗುವಂತೆ ಮಾಡಿದ ನಿನ್ನನ್ನು ನಾವೆಂದೂ ಮರೆಯಲಾರೆವು. 2008ರ 26/11ರಂದು ಪಾಕಿಸ್ಥಾನ ಮತ್ತು ಅದರ ಪ್ರಾಯೋಜಕತ್ವದಲ್ಲಿ ಉಗ್ರರು ಮುಂಬೈ ದಾಳಿ ನಡೆಸಿ ಅಮಾನುಷತೆ ಮೆರೆದರು. ಭಾರತ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ” ಎಂದು ಹೋರ್ಡಿಂಗ್ಸ್ನಲ್ಲಿ ಬರೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಡಿಡಿಸಿ ಚುನಾವಣೆಗೂ ಮುಂಚಿತವಾಗಿ ಪಾಕಿಸ್ಥಾನವು ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ ಮಾಡಿ ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದಲ್ಲದೆ, ಕಳೆದ ವಾರ ನಗ್ರೋಟಾದಲ್ಲಿ ಪಾಕಿಸ್ಥಾನ ಮೂಲದ ಭಯೋತ್ಪಾದಕರ ಗುಂಪುಗಳು 26/11 ಮಾದರಿಯಲ್ಲಿ ದಾಳಿ ನಡೆಸಲು ಮಾಡಿದ ಪ್ರಯತ್ನವನ್ನು ಭದ್ರತಾ ಪಡೆಗಳು ಭೇದಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.