ಉಡುಪಿ: ಕಡಲಿಗೆ ಮೀನುಗಾರಿಕೆಗೆ ಇಳಿಯುವ ಮೀನುಗಾರರ ರಕ್ಷಣೆಗಾಗಿ ರಾಜ್ಯ ಸರ್ಕಾರ ‘ಕಡಲು’ ಆ್ಯಪ್ ಅನ್ನು ಸಿದ್ಧಪಡಿಸಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ಗಳಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರ ವಿವರಗಳನ್ನು ಈ ಆ್ಯಪ್ನಲ್ಲಿ ದಾಖಲಿಸುವ ಮೂಲಕ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲು ಸರ್ಕಾರ ಈ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಆ್ಯಪ್ನಲ್ಲಿ ಬಂದರು ಪ್ರದೇಶದಿಂದ ಮೀನುಗಾರಿಕೆಗೆ ತೆರಳಿದ ಮತ್ತು ವಾಪಾಸ್ಸಾದ ಜನರ ವಿವರ ದಾಖಲು ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಬೋಟ್ನಲ್ಲಿ ಇರುವವರ ಸಂಖ್ಯೆ, ಬೋಟ್ನ ನೋಂದಣಿ ಸಂಖ್ಯೆ, ಪ್ರಯಾಣಿಕರ ಹೆಸರು, ಅವರ ಆಧಾರ್ ಸಂಖ್ಯೆಯನ್ನು ಈ ಆ್ಯಪ್ನಲ್ಲಿ ನಮೂದಿಸಬೇಕಿದೆ. ಇದು ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಕಡಲಿನಲ್ಲಿರುವ ಮೀನುಗಾರರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದೆ. ಜೊತೆಗೆ ಅಪಾಯದ ಸನ್ನಿವೇಶದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೂ ಹೆಚ್ಚು ಪೂರಕವಾಗಲಿದೆ. ಸಮುದ್ರ ನಡುವೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಈ ಆ್ಯಪ್ ಮಾಹಿತಿ ನೀಡಲಿದೆ. ಜೊತೆಗೆ ಕಡಲ ತಡಿಯ ವಾತಾವರಣದ ಬಗ್ಗೆಯೂ ಮೀನುಗಾರರಿಗೆ ಮಾಹಿತಿ ಒದಗಿಸುವ ಕೆಲಸವನ್ನು ಮಾಡಲಿದೆ.
ಈ ಆ್ಯಪ್ ಬಳಕೆಯಿಂದ ದೋಣಿಗಳ ಚಲನವಲನ, ಮೀನುಗಾರಿಕೆ ಮಾಡುತ್ತಿರುವ ಪ್ರದೇಶದ ಮಾಹಿತಿ ಸಹ ಲಭ್ಯವಾಗಲಿದೆ. ಮೀನುಗಾರರ ಸುರಕ್ಷತಾ ದೃಷ್ಟಿಯಿಂದ ಈ ಆ್ಯಪ್ ಹೆಚ್ಚು ಉಪಯೋಗವಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.