ನವದೆಹಲಿ: ದೀಪಾವಳಿ ಹಬ್ಬದ ಅವಧಿಯಲ್ಲಿ ದೇಶದ ಮಾರಾಟವು ಪ್ರಮುಖ ಮಾರುಕಟ್ಟೆಗಳಲ್ಲಿ 72,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (Confederation of All India Traders) ಭಾನುವಾರ ಹೇಳಿದೆ. ಭಾರತೀಯ ವ್ಯಾಪಾರಿಗಳ ಬಹಿಷ್ಕಾರದ ಕರೆಯ ಹಿನ್ನೆಲೆಯಲ್ಲಿ ಈ ದೀಪಾವಳಿಯ ಋತುವಿನಲ್ಲಿ ಚೀನಾದ ರಫ್ತುದಾರರು 40000 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಪೂರ್ವ ಲಡಾಖಿನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ)ನಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕರೆ ನೀಡಿತ್ತು.
“ಭಾರತದ ಪ್ರಮುಖ ವಿತರಣಾ ಕೇಂದ್ರಗಳೆಂದು ಪರಿಗಣಿಸಲ್ಪಟ್ಟ 20 ವಿವಿಧ ನಗರಗಳಿಂದ ಸಂಗ್ರಹಿಸಲಾದ ವರದಿಗಳ ಪ್ರಕಾರ, ದೀಪಾವಳಿ ಹಬ್ಬದ ಮಾರಾಟವು ಸುಮಾರು 72,000 ಕೋಟಿ ರೂ.ಗಳ ವಹಿವಾಟನ್ನು ಗಳಿಸಿದೆ ಮತ್ತು ಚೀನಾಕ್ಕೆ 40,000 ಕೋಟಿ ರೂ.ಗಳ ನಷ್ಟವನ್ನು ನೀಡಿದೆ” ಎಂದು ಸಿಎಐಟಿ ಹೇಳಿಕೆಯಲ್ಲಿ ತಿಳಿಸಿದೆ.
ದೀಪಾವಳಿ ಹಬ್ಬದ ಅವಧಿಯಲ್ಲಿ ಹೆಚ್ಚು ಖರೀದಿಸಿದ ಉತ್ಪನ್ನಗಳೆಂದರೆ ಫಾಸ್ಟ್ ಮೂವಿಂಗ್ ಗ್ರಾಹಕ ವಸ್ತುಗಳು (ಎಫ್ಎಂಸಿಜಿ), ಗ್ರಾಹಕ ಬಾಳಿಕೆ ಬರುವ ವಸ್ತುಗಳು, ಆಟಿಕೆಗಳು, ವಿದ್ಯುತ್ ಉಪಕರಣಗಳು ಮತ್ತು ಸರಕುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಅಡುಗೆ ಮನೆ ವಸ್ತುಗಳು ಮತ್ತು ಪರಿಕರಗಳು, ಉಡುಗೊರೆ ವಸ್ತುಗಳು, ಸಿಹಿತಿಂಡಿಗಳು, ಗೃಹೋಪಯೋಗಿ ವಸ್ತುಗಳು , ವಸ್ತ್ರ, ಪಾತ್ರೆಗಳು, ಚಿನ್ನ ಮತ್ತು ಆಭರಣಗಳು, ಪಾದರಕ್ಷೆಗಳು, ಕೈಗಡಿಯಾರಗಳು, ಪೀಠೋಪಕರಣಗಳು, ಮನೆಯ ಅಲಂಕಾರ ಸರಕುಗಳು ಎಂದು ಸಿಎಐಟಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.