ನವದೆಹಲಿ: ನ. 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಜವಹರಲಾಲ್ ನೆಹರೂ ವಿವಿ (ಜೆಎನ್ಯು) ಯಲ್ಲಿ ಸ್ಥಾಪನೆ ಮಾಡಲಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.
ಜೆಎನ್ಯುನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಸಂಜೆ 6.30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜೆಎನ್ಯುನ ಉಪ ಕುಲಪತಿ ಎಂ ಜಗದೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ವಿವೇಕಾನಂದರು ಶಾಂತಿ, ಸ್ವಾತಂತ್ರ್ಯ, ಅಭಿವೃದ್ಧಿ, ಸಾಮರಸ್ಯದ ಮೂಲಕವೇ ಭಾರತವನ್ನು ಸಶಕ್ತವಾಗಿ ಕಟ್ಟಲು ಹೊರಟ ಮಹಾತ್ಮ ಎಂದು ಅವರು ತಿಳಿಸಿದ್ದಾರೆ.
ಪ್ರತಿಮೆಯನ್ನು ಲೋಕಾರ್ಪಣೆ ಮಾಡುವುದಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಕುರಿತಾದ ಕಾರ್ಯಕ್ರಮ ಸಹ ನಡೆಯಲಿದೆ. ಆ ಬಳಿಕ ಪ್ರಧಾನಿ ಅವರು ವಿವೇಕಾನಂದರ ಪ್ರತಿಮೆ ಉದ್ಘಾಟನೆ ಮಾಡಲಿರುವುದಾಗಿ ಜೆಎನ್ಯು ತಿಳಿಸಿದೆ. ಈ ಪ್ರತಿಮೆಯನ್ನು ಜೆಎನ್ಯುನ ಹಳೆಯ ವಿದ್ಯಾರ್ಥಿಗಳ ಬೆಂಬಲದ ಜೊತೆಗೆ ಸ್ಥಾಪಿಸಲಾಗಿದೆ.
2018 ರಲ್ಲಿ ಯೂನಿವರ್ಸಿಟಿಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಜೆಎನ್ಯುನ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ನ ನೆಹರೂ ಪ್ರತಿಮೆಯ ಸಮೀಪ ಸ್ವಾಮಿ ವಿವೇಕಾನಂದರ ಪ್ರತಿಮೆ ಸ್ಥಾಪನೆ ಮಾಡಿತ್ತು. ಆದರೆ ಈ ಪ್ರತಿಮೆ ಸ್ಥಾಪನೆಯ ಹಣದ ಮೂಲವನ್ನು ಜೆಎನ್ಯು ವಿದ್ಯಾರ್ಥಿ ಸಂಘ ಮತ್ತು ಜೆಎನ್ಯುನ ಟೀಚರ್ಸ್ ಅಸೋಸಿಯೇಷನ್ ಪ್ರಶ್ನಿಸಿತ್ತು. ಈ ಪ್ರತಿಮೆ ಉದ್ಘಾಟನೆಗೂ ಮೊದಲೇ ಕಿಡಿಗೇಡಿಗಳು 2019 ರ ನವೆಂಬರ್ನಲ್ಲಿ ಧ್ವಂಸಗೊಳಿಸಿದ್ದರು. ಜೊತೆಗೆ ಬಿಜೆಪಿ ವಿರೋಧಿ ಬರಹಗಳನ್ನೂ ಬರೆಯುವ ಮೂಲಕ ನೀಚತನ ಪ್ರದರ್ಶನ ಮಾಡಿದ್ದರು.
PM Modi to unveil #SwamiVivekananda‘s statue at #JNU campus on November 12 | Track latest news updates here – https://t.co/llFAOXouJ3 pic.twitter.com/PWHdyboDOU
— Economic Times (@EconomicTimes) November 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.