ಹೈದರಾಬಾದ್: ಐತಿಹಾಸಿಕ ಚಾರ್ಮಿನಾರ್ ಕಟ್ಟಡ ದುರ್ಬಲವಾದರೆ ಅದನ್ನು ನಾವು ನೆಲಸಮಗೊಳಿಸುತ್ತೇವೆ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಹಮ್ಮೂದ್ ಅಲಿ ತಿಳಿಸಿದ್ದಾರೆ.
90 ವರ್ಷ ಹಳೆಯ ಒಸ್ಮಾನಿಯಾ ಜನರಲ್ ಹಾಸ್ಪಿಟಲನ್ನು ಕೆಡವಿ ಅಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗುತ್ತಿದೆ. ಹೀಗಾಗಿ ತನ್ನ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ‘ಚಾರ್ಮಿನಾರ್ ಕಟ್ಟಡ ದುರ್ಬಲವಾದರೆ ಅದನ್ನೂ ಕೆಡುವುತ್ತೇವೆ’ ಎಂದು ಅಲಿ ಹೇಳಿಕೆ ನೀಡಿದ್ದಾರೆ.
200 ವರ್ಷ, 400 ವರ್ಷ ಅಥವಾ 500 ವರ್ಷ ಯಾವಾಗಾದರೂ ಚಾರ್ಮಿನಾರ್ ಕಟ್ಟಡ ದುರ್ಬಲವಾದರೆ ಅದನ್ನು ನೆಲಸಮ ಮಾಡಲೇ ಬೇಕು. ಇಲ್ಲವಾದರೆ ಅದು ಕುಸಿದು ಬಿದ್ದು ಜನರ ಪ್ರಾಣ ತೆಗೆಯಬಹುದು ಎಂದಿದ್ದಾರೆ.
ಒಸ್ಮಾನಿಯಾ ಆಸ್ಪತ್ರೆಯನ್ನು ಕೆಡವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ವಿಷಯವನ್ನು ಮನದಟ್ಟು ಮಾಡಿಕೊಡುವ ಸಲುವಾಗಿ ಚಾರ್ಮಿನಾರ್ ಉದಾಹರಣೆಯನ್ನು ನೀಡಿದ್ದೇನೆಯೇ ಹೊರತು ಅದನ್ನು ಕೆಡವುವ ಯಾವುದೇ ಉದ್ದೇಶವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಒಸ್ಮಾನಿಯಾ ಆಸ್ಪತ್ರೆಯನ್ನು ಕೆಡವಿ ಅದರ ಜಾಗದಲ್ಲಿ ಅದರ 10ರಷ್ಟು ಹೆಚ್ಚು ರೋಗಿಗಳಿಗೆ ಲಭ್ಯವಿರುವ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಸರ್ಕಾರ ಹೇಳಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.