ಶ್ರೀನಗರ: ಭಾರತೀಯ ಸೇನೆಯನ್ನು ವಿಶ್ವದ ಅತ್ಯಂತ ವೃತ್ತಿಪರ ಮತ್ತು ನೈತಿಕ ಪಡೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಜಮ್ಮು ಮತ್ತು ಕಾಶ್ಮೀರದ ನೌಗಮ್ ವಲಯದಲ್ಲಿದ್ದ ಪಾಕಿಸ್ಥಾನಿ ಸೈನಿಕನ ಶಿಥಿಲಾವಸ್ಥೆಯಲ್ಲಿದ್ದ ಸಮಾಧಿಯನ್ನು ಪುನರ್ ನಿರ್ಮಾಣ ಮಾಡುವ ಮೂಲಕ ತನ್ನ ಮಾನವೀಯ ಮುಖವನ್ನು ಜಗತ್ತಿನೆದುರು ಭಾರತೀಯ ಸೇನೆ ಮತ್ತೊಮ್ಮೆ ಅನಾವರಣಗೊಳಿಸಿದೆ.
ಸೈನಿಕ ಶತ್ರು ರಾಷ್ಟ್ರದವನೇ ಆಗಿರಲಿ, ಆದರೆ ಆತನೊಬ್ಬ ಸೈನಿಕ. ಸೈನಿಕ ಸಾವಿನ ಬಳಿಕವೂ ಗೌರವಕ್ಕೆ ಅರ್ಹನಾಗಿರುತ್ತಾನೆ ಎಂಬ ತನ್ನ ಸಿದ್ಧಾಂತಕ್ಕೆ ಬದ್ಧವಾಗಿ ಭಾರತೀಯ ಸೇನೆ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ಥಾನಿ ಸೈನಿಕನ ಸಮಾಧಿಯನ್ನು ಪುನರ್ ಸ್ಥಾಪಿಸಿ ಅದು ತನ್ನ ಸಿದ್ಧಾಂತಕ್ಕೆ ಬದ್ಧತೆಯನ್ನು ತೋರಿಸಿದೆ.
ಈ ಸಮಾಧಿಯು ಪಾಕಿಸ್ಥಾನದ ದಿವಂಗತ ಮೇಜರ್ ಮೊಹಮ್ಮದ್ ಶಬೀರ್ ಖಾನ್ ಅವರದ್ದು, ಅವರನ್ನು 1972 ರಲ್ಲಿ ಭಾರತೀಯ ಸೇನಾ ಸೈನಿಕರು ನಿಯಂತ್ರಣ ರೇಖೆಯ (ಎಲ್ಒಸಿ)ಯಲ್ಲಿ ವಧಿಸಿದ್ದರು. ಖಾನ್ ಪಾಕಿಸ್ಥಾನದ ಮೂರನೇ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಸೀತಾರಾ-ಎ-ಜುರಾತ್ ಪಡೆದವರಾಗಿದ್ದಾರೆ.
ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಸಮಾಧಿಯನ್ನು ಪುನರ್ ಸ್ಥಾಪಿಸಿದೆ. ಸೈನಿಕ ಯಾವ ದೇಶಕ್ಕೆ ಸೇರಿದವನಾಗಿದ್ದರೂ ಗೌರವಕ್ಕೆ ಅರ್ಹನೆಂದು ಅದು ಹೇಳಿದೆ.
In keeping with the traditions & ethos of the #IndianArmy, #ChinarCorps resuscitated a damaged grave of Major Mohd Shabir Khan, Sitara-e-Jurrat, Pakistan Army, who was Killed in Action (KIA) at a forward location along LC in Naugam Sector on 05 May 1972.#Kashmir@adgpi pic.twitter.com/EjbFQSn9Iq
— Chinar Corps🍁 – Indian Army (@ChinarcorpsIA) October 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.