ಅಹಮದಾಬಾದ್: ಸುಮಾರು 3,000 ಕಿಲೋಗ್ರಾಂಗಳಷ್ಟು ಸೇಬುಗಳನ್ನು ಅಹಮದಾಬಾದ್ನ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಮಂಗಳವಾರ ಪ್ರದರ್ಶನಕ್ಕೆ ಇಡಲಾಗಿದೆ. ಸುಮಾರು ಏಳು ತಿಂಗಳ ನಂತರ ಮತ್ತೆ ಸಾರ್ವಜನಿಕರಿಗೆ ದೇಗುಲದ ಬಾಗಿಲನ್ನು ತೆರೆದ ಬಳಿಕ ಸೇಬು ಹಣ್ಣನ್ನು ದೇಗುಲದ ಮುಂಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
ಕೆಂಪು, ಹಸಿರು ಮತ್ತು ಗೋಲ್ಡನ್ ಬಣ್ಣದ ಸೇಬು ಪ್ರದರ್ಶನದಲ್ಲಿ ಇದ್ದವು. ದೇವರದ ವಿಗ್ರಹದ ಮುಂಭಾಗದಲ್ಲಿ ಇದನ್ನು ಇರಿಸಲಾಗಿತ್ತು.
ಏಳು ತಿಂಗಳ ನಂತರ ನವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರಿಗಾಗಿ ದೇವಾಲಯವನ್ನು ಮತ್ತೆ ತೆರೆಯಲಾಯಿತು. ಜನಪ್ರಿಯ ಪ್ರವಾಸಿ ತಾಣವೆಂದು ಕರೆಯಲ್ಪಡುವ ಈ ದೇವಾಲಯವು ಮಾರ್ಚ್ ಕೊನೆಯ ವಾರದಲ್ಲಿ ಕರೋನವೈರಸ್ ಬಿಕ್ಕಟ್ಟಿನಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದಾಗ ಸಂದರ್ಭದಲ್ಲಿ ಬಾಗಿಲನ್ನು ಮುಚ್ಚಿತ್ತು.
ಪ್ರದರ್ಶನಕ್ಕೆ ಇಡಲಾದ ಸೇಬುಗಳನ್ನು ಪೂಜೆಯ ನಂತರ ಕೋವಿಡ್-19 ರೋಗಿಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ ವಿತರಿಸಲಾಯಿತು ಎಂದು ವರದಿಯಾಗಿದೆ.
Gujarat: Around 3000 kgs of apple put at display at Shree Swaminarayan Mandir in Ahmedabad; the temple has been re-opened for devotees from today.
A priest says, “After puja, the apples will be distributed among #COVID19 patients and healthcare staff.” pic.twitter.com/6QmhkNLjsl
— ANI (@ANI) October 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.