ಹೊಸದಿಲ್ಲಿ: ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಕೆಲವು ರಾಷ್ಟ್ರೀಯ ನಾಯಕರಾದ ಜೈ ಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯ, ಶ್ಯಾಮಾಪ್ರಸಾದ್ ಮುಖರ್ಜಿ, ದೀನ್ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಸ್ಟ್ಯಾಂಪ್ಗಳನ್ನು ಹೊರತರಲು ಮುಂದಾಗಿದೆ.
ಅಂಚೆ ಕಚೇರಿಯಲ್ಲಿ ನಿರ್ದಿಷ್ಟ ಹಾಗೂ ಸ್ಮರಣಾರ್ಥ ಸ್ಟ್ಯಾಂಪ್ಗಳು ಈ ಎರಡು ವಿಧಗಳಿವೆ. ಪ್ರತಿನಿತ್ಯ ಬಳಸುವ ನಿರ್ದಿಷ್ಟ ಸ್ಟ್ಯಾಂಪ್ಗಳು ಎಲ್ಲಾ ಅಂಚೆ ಕಚೇರಿಗಳಲ್ಲಿ ಲಭ್ಯವಾಗುತ್ತಿರುತ್ತದೆ. ಆದರೆ ಸ್ಮರಣಾರ್ಥ ಬಳಸುವ ಸ್ಟ್ಯಾಂಪ್ಗಳು ಜನರಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳಲ್ಲಿ, ಸಂಸ್ಥೆಗಳಿಗೆ ಅಥವಾ ವಿಶೇಷ ಕಾರ್ಯಗಳ ಸಂದರ್ಭದಲ್ಲಿ ಮಾತ್ರ ಲಭ್ಯವಾಗುತ್ತವೆ.
ಅಂಚೆ ಚೀಟಿಗಳ ಸಂಗ್ರಹ ಸಲಹಾ ಸಮಿತಿ ಹಾಗೂ ಕೇಂದ್ರ ಸಂವಹನ ಮತ್ತು ತಂತ್ರಜ್ಞಾನ ಖಾತೆ ಸಭೆಯಲ್ಲಿ, ಗಾಂಧೀಜಿಯನ್ನು ಹೊರತುಪಡಿಸಿ ಕೇವಲ ಕಾಂಗ್ರೆಸ್ ನ ಮೊದಲ ಕುಟುಂಬವಾದ ನೆಹರೂ, ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರನ್ನೊಳಗೊಂಡ ಸ್ಟ್ಯಾಂಪ್ ಮಾತ್ರವೇ ಬಳಕೆಯಲ್ಲಿದೆ. ಸೈದ್ಧಾಂತಿಕ, ಸಾಂಸ್ಕೃತಿಕ, ಕಾಂತ್ರಿಕಾರಿಗಳು, ಸಂಗೀತ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರ ಹೆಸರಿನಲ್ಲೂ ಅಂಚೆ ಚೀಟಿ ತರುವುದು ಉತ್ತಮ ಎಂಬ ಸಲಹೆ ಸಭೆಯಲ್ಲಿ ಮೂಡಿ ಬಂದಿದೆ.
ಮೂಲಗಳ ಪ್ರಕಾರ ಇನ್ನು ಮುಂದೆ ನಿರ್ದಿಷ್ಟ ಸ್ಟ್ಯಾಂಪ್ಗಳು ಸ್ವಾಮಿ ವಿವೇಕಾನಂದ, ಕ್ರಾಂತಿಕಾರಿ ಭಗತ್ ಸಿಂಗ್, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಾಮ್ ಆಜಾದ್, ತಮಿಳು ಕವಿ ಸುಬ್ರಮಣಿಯ ಭಾರತಿ ಮತ್ತು ಭಾರತೀಯ ಸಂಗೀತದ ಆಧುನಿಕ ಕಟ್ಟಾಳುಗಳಾದ ಪಂಡಿತ್ ರವಿಶಂಕರ್, ಭೀಮಸೇನ್ ಜೋಷಿ ಮತ್ತು ಸುಬ್ಬುಲಕ್ಷ್ಮಿ ಇವರ ಭಾವಚಿತ್ರವಿರುವ ಅಂಚೆ ಚೀಟಿಗಳು ಬಿಡುಗಡೆಗೊಳ್ಳಲಿವೆ.
ಇದಲ್ಲದೇ ಸಭೆಯಲ್ಲಿ ಸ್ಮರಣಾರ್ಥ ಅಂಚೆ ಚೀಟಿಗಳಾಗಿ ಸಂಗೀತ ಕ್ಷೇತ್ರದಲ್ಲಿ ಸುಪ್ರಸಿದ್ಧರಾದ ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್, ಭೂಪೇನ್ ಹಜಾರಿಕಾ ಮತ್ತು ಗೀತಾ ದತ್, ಚಿತ್ರಕಾರರು, ನೃತ್ಯಗಾರರು ಮತ್ತು ಭಾರತದ ಕ್ರಾಂತಿಕಾರಿಗಳ ಒಂದು ಸರಣಿಯನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.