ದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನೀರಿಗಾಗಿ ಕಾದಾಟ ನಡೆಯುತ್ತಿದೆ. ಸಮೀಪದಲ್ಲೇ ಯಮುನಾ ನದಿ ಹರಿಯುತ್ತಿದ್ದರೂ ಇಲ್ಲಿನ ನಿವಾಸಿಗಳಿಗೆ ನೀರಿನ ಪೈಪ್ಲೈನ್ ವ್ಯವಸ್ಥೆ ಇಲ್ಲ. ಈ ಕಾರಣದಿಂದ ಖಾಸಗಿ ವಿತರಕರಿಂದ ಬ್ಲ್ಯಾಕ್ ಮಾರ್ಕೇಟ್ನಲ್ಲಿ ಹಣ ನೀಡಿಯೇ ನೀರು ಪಡೆಯಬೇಕಾದ ಪರಿಸ್ಥಿತಿ ಕಾಡುತ್ತಿದೆ.
ಗಲ್ಲಿಯ ಜನರು ಟ್ಯಾಂಕರ್ಗಳ ಸಹಾಯದಿಂದ ನೀರು ಪಡೆಯುತ್ತಿದ್ದು, ಸುಮಾರು 200 ಲೀಟರ್ ನೀರಿಗೆ 650ರಿಂದ 700 ರೂಪಾಯಿ (10 ಡಾಲರ್) ನೀಡಬೇಕಾಗುತ್ತದೆ. ಆದರೆ ನೀರು ಹತ್ತು ದಿನಗಳಿಗೊಮ್ಮೆ ಮಾತ್ರ ಲಭ್ಯವಾಗುತ್ತದೆ. ಈ ನಡುವೆ ಜನರು ಟ್ಯಾಂಕರ್ಗಳ ಮೇಲೆ ಹತ್ತಿ, ಪೈಪ್ಗಳ ಮೂಲಕ ಪ್ಲಾಸ್ಟಿಕ್ ಡ್ರಮ್ಗಳಲ್ಲಿ ತುಂಬಿಸುತ್ತಿದ್ದಾರೆ. ಇನ್ನು ಕೆಲವರು ಒಬ್ಬರನ್ನೊಬ್ಬರು ದೂಡುವುದು, ಜಗಳ ಮಾಡುವ ಪರಿಸ್ಥಿತಿಯೂ ಎದುರಾಗಿದೆ.
ಕ್ಷಣಮಾತ್ರದಲ್ಲಿ ಖಾಲಿಯಾಗುವ ಈ ಟ್ಯಾಂಕರ್ಗಳನ್ನು ಬಲ್ಲಾ ಪ್ರದೇಶದ ನದಿ ತೀರದಿಂದ ತುಂಬಿಸಲಾಗುತ್ತಿದೆ. ಈ ನೀರು ಪೂರೈಕೆ ಸಂಜೆ ನಾಲ್ಕು ಗಂಟೆ ನಂತರವೇ ಮಾಡುತ್ತಿದ್ದು, ಜನರು ಗಲ್ಲಿಗಲ್ಲಿಗಳಲ್ಲಿ ಸರಿಯಾದ ದಾರಿ ದೀಪಗಳಿಲ್ಲದೆ ಪರದಾಡುತ್ತಿದ್ದಾರೆ. ಉಚಿತವಾಗಿ ನೀರು ಲಭ್ಯವಾಗುತ್ತಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಬಡವರೂ ಕೂಡ ಹಣ ನೀಡಬೇಕಾಗುತ್ತದೆ.
ಟ್ಯಾಂಕರ್ಗಳಲ್ಲಿ ನೀರು ಪೂರೈಸುವ ಈ ಮಾಫಿಯಾಗಳು ಹಂತಹಂತವಾಗಿ ಭಾರತದಲ್ಲಿನ ಅಂತರ್ಜಲವನ್ನು ಖಾಲಿಯಾಗಿಸುತ್ತಿದೆ. ಒಂದು ವೇಳೆ ಇದರ ಪರಿಶೀಲನೆ ನಡೆಯದೇ ಇದ್ದಲ್ಲಿ ಇದು ಸಾಮಾಜಿಕ, ಆರ್ಥಿಕ ವಿನಾಶಕ್ಕೆ ಕಾರಣವಾಗುವ ಸಾಧ್ಯತೆ ಕಾಣುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.