ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಸ್ವಾತಂತ್ರ್ಯದ ನಂತರದ ಮೊದಲ ಭಾರತ ಕೇಂದ್ರಿತ ಶಿಕ್ಷಣ ನೀತಿಯಾಗಿದೆ. ಇದು ಸಂಸ್ಕೃತಿಯೊಂದಿಗೆ ಬೇರೂರಿರುವ ಆದರೆ ಜಾಗತಿಕ ಸ್ಪರ್ಧೆಯನ್ನು ತೆಗೆದುಕೊಳ್ಳಲು ತರಬೇತಿ ಪಡೆದ ಪ್ರಬಲ ನಾಗರಿಕರ ಅಭಿವೃದ್ಧಿಗೆ ಅಡಿಪಾಯ ಹಾಕಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಶುಕ್ರವಾರ ಹೇಳಿದ್ದಾರೆ.
ಶುಕ್ರವಾರ ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಕರ್ನಾಲ್ ಪ್ರಾದೇಶಿಕ ಕೇಂದ್ರದ ಹೊಸ ಕಟ್ಟಡದ ವರ್ಚುವಲ್ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
1991ರಲ್ಲಿ ಸ್ಥಾಪಿಸಲಾದ ಕೇಂದ್ರವು ಹರಿಯಾಣದ ದೂರದ ಪ್ರದೇಶಗಳಲ್ಲಿ 83,000 ವಿದ್ಯಾರ್ಥಿಗಳಿಗೆ ಪ್ರಸ್ತುತ 32 ಅಧ್ಯಯನ ವಲಯಗಳ ಮೂಲಕ ದೂರ ಶಿಕ್ಷಣವನ್ನು ಒದಗಿಸುತ್ತಿದೆ ಎಂದು ಸಚಿವರು ಹೇಳಿದರು.
2025 ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಜ್ಞೆಯೊಂದಿಗೆ ಹೊಂದಿಕೊಂಡಿರುವ ಎನ್ಇಪಿ 2020 ರ ಕಾರ್ಯಸೂಚಿಯನ್ನು ಕರ್ನಾಲ್ ಪ್ರಾದೇಶಿಕ ಕೇಂದ್ರವು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಎನ್ಇಪಿ 2020 ಸ್ವಾತಂತ್ರ್ಯದ ನಂತರದ ಮೊದಲ ಭಾರತ ಕೇಂದ್ರಿತ ಶಿಕ್ಷಣ ನೀತಿಯಾಗಿದೆ. ಇದು ಸಾಂಸ್ಕೃತಿಕ ಮೌಲ್ಯಗಳು ಮತ್ತು ಆವಿಷ್ಕಾರಗಳಿಗೆ, ಜ್ಞಾನ ಮತ್ತು ವಿಜ್ಞಾನಕ್ಕೆ ಮತ್ತು ಶಿಕ್ಷಣಕ್ಕಾಗಿ ಅವಕಾಶವನ್ನು ಹೊಂದಿದೆ. ಈ ನೀತಿಯು ಹೊಸ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯವನ್ನು ಹಾಕುತ್ತದೆ”ಎಂದು ಶಿಕ್ಷಣ ಸಚಿವರು ಅಭಿಪ್ರಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.