ನವದೆಹಲಿ: 2023ರ ವೇಳೆಗೆ ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ರೈಲ್ವೆ ನೆಟ್ವರ್ಕ್ಗೆ ಸಂಪರ್ಕಿಸುವತ್ತ ಭಾರತೀಯ ರೈಲ್ವೆ ಕೆಲಸ ಮಾಡುತ್ತಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ನಾವು ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ಸಂಪರ್ಕಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಇಂದಿನಂತೆ, ಸಿಕ್ಕಿಂ ಹೊರತುಪಡಿಸಿ, ಎಲ್ಲಾ ಈಶಾನ್ಯ ರಾಜ್ಯಗಳು ರೈಲು ಜಾಲಕ್ಕೆ ಸಂಪರ್ಕ ಹೊಂದಿವೆ. ಆದರೆ ಈಗ ನಾವು ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ಪರಸ್ಪರ ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಅಸ್ಸಾಂ, ತ್ರಿಪುರ ಮತ್ತು ಅರುಣಾಚಲ ರಾಜಧಾನಿಗಳು ಈಗಾಗಲೇ ಸಂಪರ್ಕ ಹೊಂದಿವೆ. ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ರಾಜಧಾನಿಗಳ ಸಂಪರ್ಕವು ಪ್ರಗತಿಯಲ್ಲಿದೆ ಮತ್ತು ಗುರಿಯನ್ನು ನಿಗದಿಪಡಿಸಲಾಗಿದೆ. ಮಾರ್ಚ್ 2022 ರಲ್ಲಿ ಮಣಿಪುರ, ಮಾರ್ಚ್ 2023 ರಲ್ಲಿ ಮಿಜೋರಾಂ, ಮಾರ್ಚ್ 2023 ರಲ್ಲಿ ನಾಗಾಲ್ಯಾಂಡ್, ಮಾರ್ಚ್ 2022 ರಲ್ಲಿ ಮೇಘಾಲಯ ಮತ್ತು 2022 ರ ಡಿಸೆಂಬರ್ನಲ್ಲಿ ಸಿಕ್ಕಿಂ ಅನ್ನು ಸಂಪರ್ಕಿಸಲಾಗುವುದು” ಎಂದು ಯಾದವ್ ಹೇಳಿದ್ದಾರೆ.
ಯಾದವ್ ಅವರು ಮಾಧವ್ಯಮ ಗೋಷ್ಠಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಪ್ರದೇಶದ ಭಾರತೀಯ ರೈಲ್ವೆಯ ಕಾರ್ಯವನ್ನು ಎತ್ತಿ ತೋರಿಸಿದರು.
“ಕಳೆದ ಐದು ವರ್ಷಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ಭರದಿಂದ ಸಾಗಲಿವೆ ಮತ್ತು 2023 ರ ವೇಳೆಗೆ ಈಶಾನ್ಯ ರಾಜ್ಯಗಳ ಈ ಎಲ್ಲಾ ರಾಜ್ಯ ರಾಜಧಾನಿಗಳು ಸಂಪರ್ಕಗೊಳ್ಳುತ್ತವೆ. ಇದು ಕಳೆದ ಐದು ವರ್ಷಗಳಿಂದ ನಾವು ಕೇಂದ್ರೀಕೃತವಾಗಿ ಗಮನ ಹರಿಸಿರುವ ಒಂದು ಪ್ರಮುಖ ರೈಲ್ವೆ ಯೋಜನೆ” ಎಂದಿದ್ದಾರೆ.
“ನಾವು ಪೂರ್ಣ ವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ ಮತ್ತು 2023 ರ ವೇಳೆಗೆ ಈಶಾನ್ಯ ರಾಜ್ಯಗಳಲ್ಲಿನ ಈ ಎಲ್ಲಾ ರಾಜಧಾನಿಗಳನ್ನು ಸಂಪರ್ಕಿಸಲಾಗುವುದು. ಇವುಗಳು ಬಹಳ ಮುಖ್ಯವಾದ ರೈಲ್ವೆ ಯೋಜನೆಗಳಾಗಿದ್ದು, ಕಳೆದ ಐದು ವರ್ಷಗಳಿಂದ ನಾವು ಇದರ ಮೇಲೆ ಗಮನಹರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.