ಶ್ರೀನಗರ: ಪಾಕಿಸ್ಥಾನ ಸೇನೆಯ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ನಾಗರಿಕರನ್ನು ಶೆಲ್ ದಾಳಿಯಿಂದ ರಕ್ಷಿಸುವ ಪ್ರಯತ್ನದ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಹಲವಾರು ಹಳ್ಳಿಗಳಲ್ಲಿ ಭೂಗತ ಸಮುದಾಯ ಬಂಕರ್ಗಳ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಇಂತಹ ಹಲವಾರು ಬಂಕರ್ಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ಈ ಬಂಕರ್ಗಳಲ್ಲಿ ಹಲವಾರು ದಿನಗಳವರೆಗೆ ಜನರಿಗೆ ಆಶ್ರಯ ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿದೆ. ಈ ಪ್ರತಿಯೊಂದು ಬಂಕರ್ಗಳು ಎರಡು ಕೊಠಡಿಗಳು ಮತ್ತು ವಾಶ್ರೂಮ್ಗಳನ್ನು ಒಳಗೊಂಡಿರುತ್ತವೆ.
ಸಮುದಾಯ ಬಂಕರ್ಗಳನ್ನು ತಲಾ 10 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕೆಲಸವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತದ ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಗೆ ವಹಿಸಲಾಗಿದ್ದು, ಅಂತಹ 18 ಬಂಕರ್ಗಳನ್ನು ಬೋನಿಯಾರ್ ಮತ್ತು ಉರಿ ಪ್ರದೇಶಗಳಲ್ಲಿ ನಿರ್ಮಿಸಲು ತಿಳಿಸಲಾಗಿದೆ. ಈ ಆರು ಬಂಕರ್ಗಳ ನಿರ್ಮಾಣವನ್ನು ಇಲಾಖೆ ಈಗಾಗಲೇ ಪ್ರಾರಂಭಿಸಿದೆ.
ಮುಂಚೂಣಿಯ ಗಡಿ ಪ್ರದೇಶದಲ್ಲಿ ಇರುವ ಮತ್ತು ಪಾಕಿಸ್ಥಾನದ ಶೆಲ್ ಮತ್ತು ಗುಂಡಿನ ದಾಳಿಗಳಿಗೆ ಹೆಚ್ಚು ಸಾಕ್ಷಿಯಾಗುವ ಉರಿಯಲ್ಲಿ ಬಂಕರ್ಗಳ ನಿರ್ಮಾಣವನ್ನು ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾಗಿದೆ.
ಬಂಕರ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಣೆ ಮಾಡಿರುವ ಇಲ್ಲಿನ ಸರ್ಪಂಚ್ ಮಂಜೂರ್ ಅಹ್ಮದ್ ಅವರು, “ಇದು ಉತ್ತಮ ಆರಂಭವಾಗಿದೆ ಆದರೆ ಈ ಪ್ರದೇಶದ ಜನರ ಮನೆಗಳಲ್ಲಿ ಇಂತಹ ಹೆಚ್ಚಿನ ಬಂಕರ್ಗಳನ್ನು ನಿರ್ಮಾಣ ಮಾಡಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.