ತಿರುವನಂತಪುರಂ: ತಿರುವನಂತಪುರಂನ ಯುಎಇ ಕಾನ್ಸುಲೇಟ್ನಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ 30 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಇಬ್ಬರು ಪ್ರಮುಖ ಆರೋಪಿಗಳನ್ನು ಶನಿವಾರ ನಗರದ ವಿವಿಧ ಸ್ಥಳಗಳಿಗೆ ಕರೆದೊಯ್ಯಲಾಯಿತು. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ಅವರನ್ನು ಮನೆ ಮತ್ತು ಕಚೇರಿಗಳಿಗೆ ಕರೆದೊಯ್ದು ತನಿಖೆ ನಡೆಸಿದರು ಎಂದು ವರದಿಗಳು ತಿಳಿಸಿವೆ.
“ಈ ರಾಜತಾಂತ್ರಿಕ ಮಾರ್ಗದ ಮೂಲಕ ಸುಮಾರು 180 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ನಾವು ನಿರ್ಣಾಯಕವಾಗಿ ಕಂಡುಕೊಂಡಿದ್ದೇವೆ. ನಾವು ಅದನ್ನು ವಾಪಾಸ್ ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ ಆದರೆ ಕಳ್ಳಸಾಗಣೆ ಮಾಡಿದ ಒಟ್ಟು ಮೊತ್ತವು ಇನ್ನೂ ಹೆಚ್ಚಿನದಾಗಿದೆ ಎಂದೂ ಶಂಕಿಸಲಾಗಿದೆ” ಎಂದು ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳಸಾಗಾಣೆಗೆ ರಾಜತಾಂತ್ರಿಕ ಮಾರ್ಗವನ್ನು ಆರೋಪಿಗಳು 12 ರಿಂದ 13 ಬಾರಿ ಬಳಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಸ್ವಪ್ನಾ ಸುರೇಶ್ ಮತ್ತು ಸರಿತ್ ಈ ಕಳ್ಳಸಾಗಣೆ ಮಾರ್ಗವನ್ನು ಕಂಡುಕೊಂಡವರು, ಆದರೆ ಸಂದೀಪ್ ನಾಯರ್ ಮತ್ತು ರಮೀಜ್ ಸೇರಿದಂತೆ ಇತರ ಆರೋಪಿಗಳು ಹಗರಣದ ಹಣಕಾಸು ಮತ್ತು ವಿತರಕರಿಗೆ ನಿರ್ಣಾಯಕ ಕೊಂಡಿಗಳಾಗಿದ್ದರು ಎಂದು ಪರಿಗಣಿಸಲಾಗಿದೆ.
“ಭಾರತವನ್ನು ತೊರೆದ ಯುಎಇ ರಾಜತಾಂತ್ರಿಕ ಈ ಪ್ರಕರಣಕ್ಕೆ ನಿರ್ಣಾಯಕನಾಗಿದ್ದಾನೆ. ಎಲ್ಲಕ್ಕಿಂತಲೂ, ಹಗರಣದ ಆರೋಪಿಗಳು ರಾಜತಾಂತ್ರಿಕ ವಿನಾಯಿತಿಯನ್ನೇ ಬಳಸಿ ಇಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜತಾಂತ್ರಿಕನ ಬ್ಯಾಗುಗಳನ್ನು ಕಾರ್ಯಕಾರಿ ಕಾನ್ಸುಲ್ ಜನರಲ್ ಮುಂದೆ ತೆರೆಯಲು ಪ್ರಾಥಮಿಕ ಅನುಮತಿಯನ್ನು ಈಗಾಗಲೇ ತನಿಖಾ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
“ಪ್ರಕ್ರಿಯೆಯ ಭಾಗವಾಗಿ ಆತನನ್ನು ಎರಡು ಬಾರಿ ಕರೆಯಲಾಯಿತು. ಆತನ ಹೆಸರಿನಲ್ಲಿ ಅಥವಾ ದೂತಾವಾಸದಲ್ಲಿ ಕಿರಿಯ ಅಧಿಕಾರಿಗಳಿಗೆ ಹಲವಾರು ಬ್ಯಾಗುಗಳು ಬಂದಿವೆ. ಸಂಭವನೀಯ ವಿಷಯ, ಸಂಪರ್ಕಗಳು ಮತ್ತು ಪಾತ್ರವನ್ನು ಪರಿಶೀಲಿಸಬೇಕಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಯುಎಇ ರಾಜತಾಂತ್ರಿಕ ಕಳೆದ ವಾರ ದೆಹಲಿ ಮೂಲಕ ಭಾರತವನ್ನು ತೊರೆದಿದ್ದಾನೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ ಇನ್ನೊಬ್ಬ ಆರೋಪಿ ಫೈಸಲ್ ಫರೀದ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ನೀಡುವಂತೆ ಎನ್ಐಎ ಇಂಟರ್ಪೋಲ್ಗೆ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.