ನವದೆಹಲಿ: 470 ಕೋಟಿ ರೂ.ಗಳ ಸಿಗ್ನಲಿಂಗ್ ಒಪ್ಪಂದವನ್ನು ಇತ್ತೀಚೆಗಷ್ಟೇ ಕಳೆದುಕೊಂಡ ಚೀನಾದ ಎಂಜಿನಿಯರಿಂಗ್ ಸಂಸ್ಥೆಯು ಇದೀಗ ಭಾರತೀಯ ರೈಲ್ವೆ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಪಿಯೂಶ್ ಗೋಯಲ್ ನೇತೃತ್ವದ ರೈಲ್ವೆ, ಡಿಎಫ್ಸಿಸಿಐಎಲ್ನ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್ಸಿ)ನಲ್ಲಿನ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಾರ್ಯಗಳಿಗಾಗಿನ ಚೀನಾದ ಕಂಪನಿಯೊಂದರ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುಕ್ತಾಯಗೊಳಿಸಿತ್ತು.
“ನಾವು ಇಂದು ಮುಕ್ತಾಯ ಪತ್ರವನ್ನು ನೀಡಿದ್ದೇವೆ. ಈ ಕೆಲಸವನ್ನು ಕೆಲವು ಭಾರತೀಯ ಸಂಸ್ಥೆಗಳಿಗೆ ನೀಡಬೇಕೆಂದು ನಾವು ಬಯಸುತ್ತೇವೆ. ಆ ಕಾರಣಕ್ಕೆ ಮರು ಬಿಡ್ ಮಾಡಲು ನಾವು ಹೊಸ ವಿಶೇಷಣಗಳನ್ನು ರಚಿಸುತ್ತಿದ್ದೇವೆ ”ಎಂದು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) ನ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಸಚನ್ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷವೆಂದರೆ, ನ್ಯೂ ಭೌಪುರ್ (ಕಾನ್ಪುರ) ಮತ್ತು ಮೊಘಲ್ಸರಾಯ್ (ಈಗ ದೀನ್ ದಯಾಳ್ ಉಪಾಧ್ಯಾಯ) ವಿಭಾಗದ ನಡುವಿನ ಪೂರ್ವ ಸಮರ್ಪಿತ ಸರಕು ಕಾರಿಡಾರ್ನಲ್ಲಿ 417 ಕಿ.ಮೀ ಉದ್ದದ ರೈಲ್ವೆ ಮಾರ್ಗಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವ ಹೊಣೆಯನ್ನು ಚೀನಾದ ಸಂಸ್ಥೆಗೆ ವಹಿಸಲಾಗಿತ್ತು.
500 ಕೋಟಿ ರೂ.ಗಳ ಒಪ್ಪಂದವನ್ನು 2016 ರಲ್ಲಿ ನೀಡಲಾಯಿತು, ಆದರೆ ಅಂದಿನಿಂದ ಚೀನಾದ ಸಂಸ್ಥೆಯ ಕೆಲಸದ ಬಗ್ಗೆ ಅಧಿಕಾರಿಗಳು ಅತೃಪ್ತರಾಗಿದ್ದರು. ವರದಿಯ ಪ್ರಕಾರ, ಸಂಸ್ಥೆಯು ಅಂದಿನಿಂದ ಶೇಕಡಾ 20 ರಷ್ಟು ಕೆಲಸವನ್ನು ಮಾತ್ರ ಪೂರ್ಣಗೊಳಿಸಿದೆ.
ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಫ್ಸಿಸಿಎಲ್) ವಿಶ್ವಬ್ಯಾಂಕ್ಗೆ (ಮುಖ್ಯ ಪ್ರಾಜೆಕ್ಟ್ ಫೈನಾನ್ಶಿಯರ್) ಅರ್ಜಿ ಸಲ್ಲಿಸಿದೆ ಮತ್ತಿ ಚೀನಾದ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರವನ್ನು ಅವರಿಗೆ ತಿಳಿಸಿದೆ.
ಯೋಜನೆಯ ಪ್ರಗತಿಯಲ್ಲಿನ ಕಳಪೆ ಸಾಧನೆಯಿಂದಾಗಿ 14 ದಿನಗಳ ಸೂಚನೆಯ ನಂತರ ಚೀನಾದ ಸಂಸ್ಥೆಯೊಂದಿಗಿನ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಚನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.