ಮುಂಬಯಿ: ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯನ್ನು ಸಮತೋಲನಗೊಳಿಸಬೇಕಾದಾಗ ಜಾತ್ಯತೀತ ಸರ್ಕಾರ ಏನು ಮಾಡುತ್ತದೆ? ಶಿವಸೇನೆ ಸಿಎಂ ಉದ್ಧವ್ ಠಾಕ್ರೆ ಅವರ ಜಾತ್ಯತೀತ ಸರ್ಕಾರದ ಅಧೀನದಲ್ಲಿರುವ ಮಹಾರಾಷ್ಟ್ರ ಶಿಕ್ಷಣ ಮಂಡಳಿ ಹುತಾತ್ಮ ಸುಖದೇವ್ ಹೆಸರನ್ನು ಕುರ್ಬಾನ್ ಹುಸೇನ್ ಎಂದು ಬದಲಾಯಿಸುತ್ತದೆ.
ಬ್ರಿಟಿಷ್ ಸರ್ಕಾರವು 1931 ರ ಮಾರ್ಚ್ 23 ರಂದು ಭಾರತದ ಮೂರು ರತ್ನಗಳನ್ನು ಗಲ್ಲಿಗೇರಿಸಿತು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆ ರತ್ನಗಳೇ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು. ಅವರ ತ್ಯಾಗಕ್ಕೆ ಗೌರವವಾಗಿ ಶಹೀದ್ ದಿವಸ್ ಅನ್ನೂ ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.
ಈ ಮೂರು ಹೆಸರುಗಳಿಗೆ ಭಾರತದಲ್ಲಿ ಅಮೋಘವಾದ ಗೌರವವಿದೆ. ಎಲ್ಲಾ ಸಂದರ್ಭದಲ್ಲೂ ಈ ಹೆಸರುಗಳನ್ನು ಒಟ್ಟಿಗೆ ತರಲಾಗುತ್ತದೆ. ಮಕ್ಕಳ ಪಠ್ಯಪುಸ್ತಕದಲ್ಲೂಈ ಹೆಸರುಗಳು ಮಕ್ಕಳಿಗೆ ಪ್ರೇರಣಾದಾಯಿ ಆಗಿವೆ. ಆದರೆ 8ನೇ ತರಗತಿ ಬಾಲಭಾರತಿ ಮರಾಠಿ ಪುಸ್ತಕವು ಸುಖದೇವ್ ಬದಲಿಗೆ ಕುರ್ಬಾನ್ ಹುಸೇನ್ ಎಂಬ ಹೆಸರನ್ನು ನಮೋದಿಸಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. . “ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ” (ಮಶ್ಯ ದೇಶಾವರ್ ಪ್ರೇಮ್ ಅಹೆ) ಎಂಬ ಅಧ್ಯಾಯದಲ್ಲಿ ಸುಖದೇವ್ ಬದಲಿಗೆ ಕುರ್ಬಾನ್ ಹುಸೇನ್ ಹೆಸರನ್ನು ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಠ್ಯದಲ್ಲಿ ದೇಶಭಕ್ತಿ ವಿಷಯದ ಕುರಿತು ಶಿಕ್ಷಕ ಮತ್ತು ಅವರ ವಿದ್ಯಾರ್ಥಿಗಳ ನಡುವೆ ಸಂಭಾಷಣೆ ಬರುತ್ತದೆ. ವಿದ್ಯಾರ್ಥಿಗಳಲ್ಲಿ ಒಬ್ಬರು “ಭಗತ್ ಸಿಂಗ್, ರಾಜ್ಗುರು, ಕುರ್ಬನ್ ಹುಸೇನ್ ಅವರನ್ನು ಗಲ್ಲಿಗೇರಿಸಲಾಯಿತು. ಅವರು ನಿಜವಾದ ದೇಶಭಕ್ತರು ” ಎನ್ನುತ್ತಾನೆ.
ಮುದ್ರಣ ದೋಷದಿಂದ ಹೀಗಾಯಿತು ಎಂದು ಶಿಕ್ಷಣ ಮಂಡಳಿ ಸಮಜಾಯಿಷಿ ನೀಡಿದೆ. ಆದರೆ ಇಷ್ಟು ದೊಡ್ಡ ಮುದದರಣ ದೋಷ ಹೇಗಾಗಲು ಸಾಧ್ಯ ಎಂಬುದೇ ಎಲ್ಲರಿಗೂ ಅಚ್ಚರಿಯುಂಟು ಮಾಡಿದೆ.
ಬ್ರಾಹ್ಮಣ ಮಹಾಸಂಘ ಇದಕ್ಕೆ ತೀವ್ರವಾದ ಆಕ್ಷೇಪವನ್ನು ಎತ್ತಿದೆ. ಇದು ಸುಖದೇವ್ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ಕ್ರಾಂತಿಕಾರಿಗಳಿಗೆ ಮಾಡಿದ ಅವಮಾನ ಎಂದಿದೆ. “ತಕ್ಷಣವೇ ಪಠ್ಯ ಪುಸ್ತಕವನ್ನು ವಾಪಾಸ್ ಪಡೆಯಬೇಕು, ಈ ಬಗ್ಗೆ ತನಿಖೆ ನಡೆಸಬೇಕು. ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಬ್ರಾಹ್ಮಣ ಮಹಾಸಂಘದ ಆನಂದ್ ದೇವ್ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.