ನವದೆಹಲಿ: ವಿಶ್ವದ ಭವಿಷ್ಯದ ತೈಲ ಕೊರತೆಯನ್ನು ನೀಗಿಸಲು ನವೀಕರಿಸಬಹುದಾದ ಜೈವಿಕ ಸಂಪನ್ಮೂಲಗಳಿಂದ ಇಂಧನವನ್ನು ಉತ್ಪಾದಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿವೆ. ಆದರೆ ಆಹಾರ ಸಂಪನ್ಮೂಲಗಳನ್ನು ಇಂಧನವಾಗಿ ಪರಿವರ್ತಿಸುವುದರಿಂದ ಆಹಾರದ ಜಾಗತಿಕ ಪೂರೈಕೆ-ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗುವಾಹಟಿ ಸಂಶೋಧಕರು ಆಹಾರಗಳಿಗೆ ಬಳಸದ ಬೀಜಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.
“ಸಸ್ಯಗಳ ತ್ಯಾಜ್ಯ ಬೀಜಗಳಿಂದ ಪಡೆದ ತೈಲಗಳನ್ನು ಜೈವಿಕ ಇಂಧನಗಳನ್ನು ಉತ್ಪಾದಿಸಲು, ಆಹಾರ ಮತ್ತು ಇಂಧನದ ನಡುವಿನ ಸ್ಪರ್ಧೆಯನ್ನು ತೊಡೆದುಹಾಕಲು ಬಳಸಬಹುದು” ಎಂದು ಗುವಾಹಟಿಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಕೌಸ್ತುಭಾ ಮೊಹಂತಿ ಹೇಳುತ್ತಾರೆ.
ಭಾರತದಲ್ಲಿ ಕಂಡುಬರುವ ಸಸ್ಯಗಳು ಮತ್ತು ಮರಗಳಾದ ಪೀಲಾ ಕಾನರ್ (ಹಳದಿ ಕಬ್ಬು, ಮಾಹುವಾ (ಇಪ್ಪೆ), ಗುಲ್ಮೋಹರ್, ಬೇವು, ಮಳೆ ಮರ, ಕ್ಯಾಸ್ಟರ್, ಕುಸುಮೆಟ್ ಮುಂತಾದವುಗಳು ತೈಲಗಳನ್ನು ಹೊಂದಿರುವ ಬೀಜಗಳನ್ನು ಉತ್ಪಾದಿಸುತ್ತವೆ, ಈ ಬೀಜಗಳಿಂದ ಜೈವಿಕ ಇಂಧನಗಳನ್ನು ತಯಾರಿಸಬಹುದು. ಡಾ. ಮೊಹಂತಿ ಮತ್ತು ಅವರ ಸಂಶೋಧನಾ ತಂಡವು ಇವುಗಳಿಂದ ಮತ್ತು ಇತರ ಬೀಜಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಲು ಶಾಖ-ರಾಸಾಯನಿಕ ಮಾರ್ಗವನ್ನು ಬಳಸುತ್ತಿದೆ.
“ಈ ಅಡುಗೆಗ ಬಳಸಲಾಗದಂತಹ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ತೈಲವಿದೆ ಎಂದು ನಾವು ಕಂಡುಕೊಂಡಿದ್ದೇವೆ, ಅದು ರೋಮಾಂಚನಕಾರಿಯಾಗಿದೆ” ಎಂದು ಡಾ ಮೊಹಂತಿ ಹೇಳಿದ್ದಾರೆ. ಈ ತೈಲಗಳಿಂದ ಜೈವಿಕ ಇಂಧನವನ್ನು ಪಡೆಯಲು ಸಂಶೋಧಕರು ಕಡಿಮೆ ಬೆಲೆಯ ಪೈರೋಲೈಜರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಜೈವಿಕ ಇಂಧನದ ಇಳುವರಿ ಬಹಳ ಉತ್ತೇಜನಕಾರಿಯಾಗಿದ್ದರೂ, ಕೆಲವು ಸಮಸ್ಯೆಗಳಿವೆ – ಜೈವಿಕ ಇಂಧನವು ಕಡಿಮೆ ಆಮ್ಲೀಯತೆ ಮತ್ತು ಹೆಚ್ಚಿನ ಆಮ್ಲಜನಕವನ್ನು ಹೊಂದಿರುತ್ತದೆ, ಇದು ಸಾರಿಗೆ ಇಂಧನವಾಗಿ ಬಳಸಲು ಸೂಕ್ತವಲ್ಲ.
ಅಡುಗೆಗೆ ಬಳಸಲಾಗದ ಬೀಜದ ಎಣ್ಣೆಗಳಿಂದ ಪಡೆದ ಜೈವಿಕ ಇಂಧನಗಳ ಗುಣಲಕ್ಷಣಗಳನ್ನು ಸುಧಾರಿಸಲು, ವಿಜ್ಞಾನಿಗಳು ಬೀಜದ ಎಣ್ಣೆಯನ್ನು ಜೈವಿಕ ಇಂಧನವಾಗಿ ಪರಿವರ್ತಿಸುವಾಗ ಕ್ಯಾಲ್ಸಿಯಂ ಆಕ್ಸೈಡ್, ಝಿಯೋಲೈಟ್ ಮುಂತಾದ ವಿವಿಧ ವೇಗವರ್ಧಕಗಳನ್ನು ಬಳಸಿದ್ದಾರೆ. ಇಳುವರಿ ಮತ್ತು ಗುಣಮಟ್ಟ ಎರಡೂ ಸುಧಾರಿಸಿದೆ.
“ನಮ್ಮ ಜೈವಿಕ ಇಂಧನದ ಹೆಚ್ಚಿನ ಸ್ನಿಗ್ಧತೆ ಇನ್ನೂ ಸಮಸ್ಯೆಯಾಗಿದೆ, ಆದರೆ ಇದನ್ನು ನಿವಾರಿಸಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೇವೆ” ಎಂದು ಡಾ ಮೊಹಂತಿ ಹೇಳುತ್ತಾರೆ.
“ಜೈವಿಕ ಇಂಧನದ ಬೇಡಿಕೆಯು ಭವಿಷ್ಯದಲ್ಲಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಅವುಗಳನ್ನು ಆಹಾರ ಮೂಲಗಳಿಂದ ಉತ್ಪಾದಿಸುವುದು ಖಂಡಿತವಾಗಿಯೂ ಸಮರ್ಥನೀಯವಲ್ಲ” ಎಂದು ಡಾ ಮೊಹಂತಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.