ನವದೆಹಲಿ: ಭಾರತದ ಜಿಯೋ ಪಾಲಿಟಿಕ್ಸ್ ಬಗ್ಗೆ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರು ತಿರುಗೇಟು ನೀಡಿದ್ದು, ಭಾರತದ ವಿದೇಶಾಂಗ ನೀತಿಯ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದ್ದಾರೆ.
ಎಲ್ಎಸಿ ಸಂಘರ್ಷದ ಬಗ್ಗೆ ಸರಕಾರದ ಮೇಲೆ ಟೀಕೆ ಮಾಡಿರುವ ರಾಹುಲ್ ಗಾಂಧಿಯವರು, ವಿಡಿಯೋ ಸಂದೇಶವನ್ನು ಹರಿಬಿಟ್ಟು ನರೇಂದ್ರ ಮೋದಿ ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದರು. ಕಳೆದ ಆರು ವರ್ಷಗಳಿಂದ ದೇಶವು ಆರ್ಥಿಕತೆ ಮತ್ತು ವಿದೇಶಾಂಗ ನಿಯಮಕ್ಕೆ ಸಂಬಂಧಿಸಿದಂತೆ ದುರ್ಬಲವಾಗಿದೆ ಎಂದಿದ್ದರು.
ರಾಹುಲ್ ಅವರ ಪ್ರತಿ ಹೇಳಿಕೆಗೂ ಅತ್ಯಂತ ತೀಕ್ಷ್ಣವಾಗಿ ಪ್ರತ್ಯುತ್ತರವನ್ನು ನೀಡಿರುವ ಜೈಶಂಕರ್, ಭಾರತದ ಪ್ರಮುಖ ಪಾಲುದಾರಿಕೆಗಳು ಅತ್ಯಂತ ಬಲಿಷ್ಠವಾಗಿದೆ ಮತ್ತು ಅಂತರಾಷ್ಟ್ರೀಯ ನಿಲುವುಗಳು ಉನ್ನತಮಟ್ಟದಲ್ಲಿದೆ ಎಂದಿದ್ದಾರೆ.
ಭಾರತವು ಚೀನಾದೊಂದಿಗೆ ಸಮಾನಾಂತರವಾಗಿ ತೊಡಗಿಸಿಕೊಳ್ಳುತ್ತಿದೆ ಮತ್ತು ಚೀನಾ- ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್, ಬೆಲ್ಟ್ ರೋಡ್ ಉಪಕ್ರಮ, ವಿಶ್ವಸಂಸ್ಥೆ ಗುರುತಿಸಿದ ಉಗ್ರರು ಮುಂತಾದವುಗಳಿಗೆ ಸಂಬಂಧಿಸಿದಂತೆ ಭಾರತವು ಬಹಿರಂಗವಾದ ನಿಲುವುಗಳನ್ನು ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ.
ಶ್ರೀಲಂಕಾವು ಬಂದರನ್ನು ಚೀನಾಗೆ ನೀಡುತ್ತಿರುವ ಬಗ್ಗೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜೈಶಂಕರ್, ಹಂಬನ್ಟೋಟ ಬಂದರು ಒಪ್ಪಂದವನ್ನು 2008ರಲ್ಲಿ ಅಂತಿಮಗೊಳಿಸಲಾಗಿದ್ದು, ಈ ಬಗೆಗಿನ ಪ್ರಶ್ನೆಯನ್ನು ಆಗ ಅಧಿಕಾರದಲ್ಲಿದ್ದವರ ಬಳಿಯೇ ರಾಹುಲ್ ಗಾಂಧಿ ಕೇಳಬೇಕು ಎಂದಿದ್ದಾರೆ.
ನೆರೆಹೊರೆಯ ರಾಷ್ಟ್ರಗಳೊಂದಿಗೆ ಭಾರತದ ಸುಧಾರಿಸುತ್ತಿರುವ ಸಂಬಂಧಗಳ ಬಗ್ಗೆ ಮಾಹಿತಿಯನ್ನು ಜೈಶಂಕರ್ ಈ ವೇಳೆ ನೀಡಿದ್ದಾರೆ.
ಬಾಲಾಕೋಟ್ ಮತ್ತು ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ಥಾನವು ಪ್ರಸ್ತುತ ಮತ್ತು ಯುಪಿಎ ಅವಧಿಯ ಭಾರತದ ಮಿಲಿಟರಿ ಕಾರ್ಯಾಚರಣೆಯ ವ್ಯತ್ಯಾಸವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದೆ ಎಂದಿದ್ದಾರೆ.
.@RahulGandhi hs questions on Foreign Policy. Here are some answers:
•Our major partn’ships are strongr & internat’l standng higher.Witness regular summits&informal meetngs wth #US #Russia #Europe & #Japan.India engages #China on more equal terms politically.
Ask the analysts. https://t.co/GPf17JWSac
— Dr. S. Jaishankar (@DrSJaishankar) July 17, 2020
•We speak our mind more openly now. On #CPEC, on #BRI, on South China Sea, on UN-sanctioned terrorists, etc.
Ask the media.
— Dr. S. Jaishankar (@DrSJaishankar) July 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.