ನವದೆಹಲಿ: ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಪರಿಣಾಮಕಾರಿ ಕಣ್ಗಾವಲು ಇಡಲು ರಾಜ್ಯದಲ್ಲಿ ಒಂದು ಲಕ್ಷ ತಂಡಗಳನ್ನು ರಚಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
“ಪರಿಣಾಮಕಾರಿ ಕಣ್ಗಾವಲಿಗಾಗಿ, ಇಡೀ ರಾಜ್ಯದಲ್ಲಿ ಒಂದು ಲಕ್ಷ ತಂಡಗಳನ್ನು ರಚಿಸಲು ಮುಖ್ಯಮಂತ್ರಿ ಸೂಚನೆ ನೀಡಿದರು ಮತ್ತು ಪ್ರತಿ ಜಿಲ್ಲೆಯ ತಂಡದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಡಬೇಕು ಎಂದು ಹೇಳಿದರು” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯು ಟ್ವೀಟ್ ಮೂಲಕ ತಿಳಿಸಿದೆ.
“ಕೆಜಿಎಂಯುನ ಪಲ್ಮೊನರಿ ಮತ್ತು ತುರ್ತು ಆರೈಕೆ ವಿಭಾಗದ ಡಾ. ವೇದ ಪ್ರಕಾಶ್ ಅವರು, ಪ್ರಸ್ತುತ ಮಳೆಯಿಂದಾಗಿ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದೆ, ಇದರಿಂದಾಗಿ ಸೋಂಕು ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿಗೆ ತಿಳಿಸಿದರು” ಎಂದು ಟ್ವೀಟ್ ತಿಳಿಸಿದೆ.
ಡಾ. ಪ್ರಕಾಶ್ ಅವರ ಪ್ರಕಾರ, ಕೋವಿಡ್ -19 ರೋಗಿಗಳಲ್ಲಿ 80 ಪ್ರತಿಶತ ರೋಗಲಕ್ಷಣವಿಲ್ಲದವರು ಅಥವಾ ಕಡಿಮೆ ಲಕ್ಷಣ ಇರುವವರು. 15 ಪ್ರತಿಶತ ರೋಗಿಗಳು ಮಧ್ಯಮ ರೋಗ ಲಕ್ಷಣ ಹೊಂದಾದ್ದಾರೆ. ಇದಲ್ಲದೆ, ಕೇವಲ 5 ಪ್ರತಿಶತದಷ್ಟು ರೋಗಿಗಳು ಮಾತ್ರ ತೀವ್ರ / ನಿರ್ಣಾಯಕ ಹಂತದಲ್ಲಿದ್ದಾರೆ. ಲಕ್ಷಣರಹಿತರನ್ನು ಮನೆಯಲ್ಲಿ ಐಸೋಲೇಷನ್ನಲ್ಲಿ ಇಡಬೇಕು. ಇದರಿಂದ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ಸೈಟ್ನ ಪ್ರಕಾರ ಶುಕ್ರವಾರ ಯುಪಿ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 15,720 ಇದೆ. ಗುಣಪಡಿಸಿದ ಮತ್ತು ಬಿಡುಗಡೆ ಆದ ಸಂಖ್ಯೆ 26,675. ಸಾವಿನ ಸಂಖ್ಯೆ 1,046 ಆಗಿದೆ. ಕೊರೊನಾವೈರಸ್ ಪ್ರಕರಣಗಳ ಒಟ್ಟು ಸಂಖ್ಯೆ ರಾಜ್ಯದಲ್ಲಿ 43,441 ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.