ನವದೆಹಲಿ: ಪಾಕಿಸ್ಥಾನದಲ್ಲಿ ಬಂಧಿತರಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಅವರನ್ನು ರಾಜತಾಂತ್ರಿಕವಾಗಿ ಭೇಟಿ ಮಾಡುವ ಎರಡನೇ ಅವಕಾಶವನ್ನು ಭಾರತವು ಗುರುವಾರ ಪಡೆದುಕೊಂಡಿದೆ. ಇದು ವರ್ಷದಲ್ಲಿ ಎರಡನೇಯ ರಾಜತಾಂತ್ರಿಕ ಭೇಟಿಯಾಗಿದೆ.
ಪಾಕಿಸ್ಥಾನವು ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇರೆಗೆ ಬಂಧಿಸಿ ಜೈಲಿನಲ್ಲಿ ಇಟ್ಟಿದೆ.
ಇಂದು ಜಾದವ್ ಮತ್ತು ಇಬ್ಬರು ಭಾರತೀಯ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ . ಈ ಬಾರಿ ಮಾತುಕತೆಗೆ ಎರಡು ಗಂಟೆಗಳ ಕಾಲಾವಕಾಶವನ್ನು ನೀಡಲಾಗಿತ್ತು. ಮಾತುಕತೆ ಸಂಜೆ 5.30ಕ್ಕೆ ಅಂತ್ಯವಾಗಿದೆ.
ಜುಲೈ ತಿಂಗಳ ಆರಂಭದಲ್ಲಿ, ಜಾದವ್ ಅವರಿಗೆ ಎರಡನೇ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸುವುದಾಗಿ ಘೋಷಣೆ ಮಾಡಿತ್ತು. ಅವರ ತಂದೆಗೆ ಮತ್ತು ಪತ್ನಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡುವುದಾಗಿ ಹೇಳಿತ್ತು. ಭಾರತವು ಯಾವುದೇ ಷರತ್ತುಗಳಿಲ್ಲದೆ ಜಾದವ್ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ಕೇಳಿತ್ತು.
2019ರ ಸಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಮೂರು ವರ್ಷಗಳ ಬಳಿಕ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಲಾಗಿತ್ತು. ಇಸ್ಲಾಮಾಬಾದಿನಲ್ಲಿ ಭಾರತದ ಡೆಪ್ಯೂಟಿ ಹೈಕಮಿಷನರ್ ಗೌರವ ಅಹುಲ್ವಾಲಿಯ ಅವರು ಜಾದವ್ ಅವರನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಸುಳ್ಳು ಹೇಳುವಂತೆ ಜಾದವ್ ಅವರ ಮೇಲೆ ಪಾಕಿಸ್ಥಾನವು ತೀವ್ರವಾದ ಒತ್ತಡವನ್ನು ಹೇರುತ್ತಿದೆ ಎಂಬ ವಿಷಯ ಭಾರತದ ರಾಜತಾಂತ್ರಿಕರ ಗಮನಕ್ಕೆ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.