ನವದೆಹಲಿ: ಚಬಹಾರ್-ಜಹೇಡನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂದು ಹೇಳಿರುವ ಭಾರತೀಯ ಪತ್ರಿಕೆ ವರದಿಯನ್ನು ಇರಾನ್ ಬುಧವಾರ ತಳ್ಳಿಹಾಕಿದೆ.
ಇರಾನ್ನ ಬಂದರುಗಳು ಮತ್ತು ಕಡಲ ಸಂಘಟನೆಯ ಉಪನಾಯಕರಾದ ಫರ್ಹಾದ್ ಮೊಂಟಾಸರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ” ಈ ವರದಿಯು ಸಂಪೂರ್ಣವಾಗಿ ಸುಳ್ಳನ್ನು ಒಳಗೊಂಡಿದೆ ಎಂದಿದ್ದಾರೆ. “ಜಹೇಡನ್-ಚಬಹಾರ್” ರೈಲ್ವೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲವಾದ್ದರಿಂದ ಈ ವರದಿ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದಾರೆ.
“ಇರಾನ್ ಚಬಹಾರ್ನಲ್ಲಿ ಹೂಡಿಕೆಗಾಗಿ ಭಾರತೀಯರೊಂದಿಗೆ ಎರಡು ಒಪ್ಪಂದಗಳಿಗೆ ಮಾತ್ರ ಸಹಿ ಹಾಕಿದೆ. ಒಂದು ಬಂದರಿನ ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ ಸಂಬಂಧಿಸಿದೆ, ಮತ್ತು ಎರಡನೆಯದು ಭಾರತದ 150 ಮಿಲಿಯನ್ ಹೂಡಿಕೆ ಮೊತ್ತಕ್ಕೆ ಸಂಬಂಧಿಸಿದೆ” ಎಂದು ಇರಾನ್ನ ಅಧಿಕೃತ ಸುದ್ದಿ ಐಆರ್ಎನ್ಎಗೆ ಮೊಂಟಾಸರ್ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಇರಾನ್ ನಡುವಿನ ಮಾತುಕತೆ ವೇಳೆ ಚಬಹಾರ್ ರೈಲ್ವೆ ಮೂಲಸೌಕರ್ಯ ಮತ್ತು ರೈಲ್ವೆಯ ವಿಷಯವನ್ನು ಒಪ್ಪಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕದ ನಿರ್ಬಂಧಗಳಿಗೆ ಹೆದರಿ ಹೂಡಿಕೆ ಮಾಡಲು ನವದೆಹಲಿ ಹಿಂದೇಟು ಹಾಕಿದ ನಂತರ ಭಾರತದ ಸಹಭಾಗಿತ್ವವಿಲ್ಲದೆ ದೀರ್ಘಾವಧಿಯ ಸ್ಥಗಿತಗೊಂಡ ರೈಲು ಯೋಜನೆಯನ್ನು ಮುಂದುವರಿಸಲು ಇರಾನಿನ ಸರ್ಕಾರ ನಿರ್ಧರಿಸಿದೆ ಎಂದು ಮಂಗಳವಾರ ಹಿಂದೂ ಪತ್ರಿಕೆ ವರದಿ ಮಾಡಿತ್ತು.
ವರದಿಯನ್ನು ತಳ್ಳಿಹಾಕಿದ ಮೊಂಟಾಸರ್, ” ಅಮೆರಿಕಾದ ನಿರ್ಬಂಧಗಳಿಗೂ ಚಬಹಾರ್ನಲ್ಲಿನ ಇರಾನ್-ಭಾರತದ ಸಹಕಾರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.