ಶ್ರೀನಗರ: ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದೆ. ಮಾತ್ರವಲ್ಲದೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿ ಸರೋವರಗಳ ಸುಂದರೀಕರಣ ಪ್ರಕ್ರಿಯೆಯನ್ನು ಕೂಡ ಆರಂಭ ಮಾಡಲಾಗಿದೆ. ಪ್ರಸ್ತುತ ಬರಿ ನಂಬಲ್ ಸರೋವರ ತಟವನ್ನು ಸುಂದರೀಕರಣಗೊಳಿಸುವ ಅಭಿಯಾನವನ್ನು ಆರಂಭಿಸಲಾಗಿದೆ.
ಬರಿ ನಂಬಲ್ ಶ್ರೀನಗರದ ಕೆಳ ನಗರಪ್ರದೇಶದ ಅತ್ಯಂತ ಆಕರ್ಷಣೀಯ ಪ್ರವಾಸಿತಾಣವಾಗಿದೆ. ಇದೀಗ ಅಲ್ಲಿ ಹೆಚ್ಚಿನ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಉದ್ಯೋಗವಕಾಶಗಳನ್ನು ಸೃಷ್ಠಿ ಮಾಡಲು ಸುಂದರೀಕರಣ ಅಭಿಯಾನವನ್ನು ಆರಂಭ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಸರೋವರ ಮತ್ತು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ ಈ ಅಭಿಯಾನವನ್ನು ಮುನ್ನಡೆಸುತ್ತಿದೆ.
ಅಭಿಯಾನದ ಭಾಗವಾಗಿ, ಸರೋವರದ ತಟದಲ್ಲಿ ಫುಡ್ ಕೋರ್ಟ್ ಮತ್ತು ವಾಕಿಂಗ್ ಪಾಥ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸಲಿದೆ ಮತ್ತು ಹೆಚ್ಚಿನ ಉದ್ಯೋಗವನ್ನು ಸ್ಥಳೀಯರಿಗೆ ಒದಗಿಸಲಿದೆ ಎಂದು ಪ್ರಾಧಿಕಾರದ ಎಂಜಿನಿಯರ್ ಮಸೂದ್ ಅಹಮದ್ ಅವರು ಅಭಿಪ್ರಾಯಿಸಿದ್ದಾರೆ.
ಸರಕಾರ ಕೈಗೊಂಡಿರುವ ಸುಂದರೀಕರಣ ಅಭಿಯಾನವನ್ನು ಸ್ಥಳೀಯರು ಕೂಡ ಪ್ರಶಂಸಿಸಿದ್ದಾರೆ. ” ಇದು ಅತ್ಯುತ್ತಮ ಹೆಜ್ಜೆ. ಹಿಂದೆ ಇಲ್ಲಿ ಅನೇಕ ಸಮಸ್ಯೆಗಳಿದ್ದವು ಮತ್ತು ಜನರು ಸರೋವರದಲ್ಲಿ ಓಡಾಡಲು ಭಯಭೀತರಾಗಿದ್ದರು. ಇದೀಗ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ” ಎಂದು ಸ್ಥಳೀಯ ಸಾಜಿದ್ ಖಾನ್ ಅಭಿಪ್ರಾಯಿಸಿದ್ದಾರೆ.
“ಈ ಸರೋವರ ತುಂಬಾ ಕೊಳಕು ಆಗಿ ಪರಿವರ್ತನೆಗೊಂಡಿತ್ತು. ಇದೀಗ ಇದನ್ನು ಸ್ವಚ್ಛ ಮಾಡುವ ಕಾರ್ಯ ನಡೆಸಲಾಗುತ್ತಿದೆ” ಹಿಂದು ಮತ್ತೋರ್ವ ಸ್ಥಳೀಯ ಹೇಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.