ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವೈದ್ಯಕೀಯ ವಲಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಪೂರಕವಾಗುವಂತೆ ರಿವರ್ಸ್ ಟ್ರಾನ್ಸ್ ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (RTPCR) ಪರೀಕ್ಷೆಗಳನ್ನು ನಡೆಸುವ ಪ್ರಯೋಗಾಲಯಗಳ ವರದಿಯಲ್ಲಿ ಸೈಕಲ್ ಥ್ರೆಶೋಲ್ಡ್ ಮಟ್ಟವನ್ನು ನಮೂದು ಮಾಡುವಂತೆ ಸೂಚಿಸಲಾಗಿದೆ.
ಇದು ಕೊರೋನಾ ಸೋಂಕಿತರಲ್ಲಿನ ವೈರಸ್ ನ ಪ್ರಮಾಣದ ತೀವ್ರತೆಯ ಸ್ಪಷ್ಟತೆಯನ್ನು ನೀಡಲಿದ್ದು ಚಿಕಿತ್ಸಾ ಸಮಯದಲ್ಲಿ ಪೂರಕವಾಗಿ ಕೆಲಸ ಮಾಡಲಿದೆ. ತೀವ್ರವಾಗಿ ರೋಗದಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿಯೂ ಈ ಕ್ರಮ ವೈದ್ಯಕೀಯ ಸಿಬ್ಬಂದಿಗಳಿಗೆ ಸಹಕಾರಿಯಾಗಿ ಪರಿಣಮಿಸಲಿದೆ. ಈ ವರೆಗೆ ರಾಜ್ಯದಲ್ಲಿ ಸುಮಾರು 928 ಮಂದಿ ಸೋಂಕು ತಗುಲಿ ಸಾವನ್ನಪ್ಪಿದ್ದು, ನಿರ್ಣಾಯಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಪೂರಕ ಚಿಕಿತ್ಸೆಗಳನ್ನು ನೀಡುವಲ್ಲಿಯೂ ಈ ಕ್ರಮ ಉತ್ತಮ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಗಿಗಳ ಪರೀಕ್ಷಾ ವರದಿಗಳನ್ನು ತಡವಾಗಿ ನೀಡುತ್ತಿರುವುದರಿಂದಾಗಿ ಸರಿಯಾದ ಚಿಕಿತ್ಸೆಗೂ ಮುನ್ನವೇ ರೋಗ ಉಲ್ಬಣವಾಗುತ್ತಿದ್ದು, ಪರಿಣಾಮಕಾರಿ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ RTPCR ಕ್ರಮವನ್ನು ಜಾರಿಗೆ ತಂದಲ್ಲಿ ಮಾದರಿ ಪರೀಕ್ಷೆಗಳ ವರದಿ ಶೀಘ್ರ ಕೈ ಸೇರುತ್ತದೆ. ಅದರಿಂದ ರೋಗಿಗಳಿಗೆ ಆರಂಭದ ಘಟ್ಟದಲ್ಲಿಯೇ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿಯೂ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಇದು ಸಹಾಯ ಮಾಡಲಿದೆ. ಜೊತೆಗೆ ಸಮಯೋಚಿತ ಚಿಕಿತ್ಸಾ ಕ್ರಮದಿಂದಾಗಿ ರೋಗಿಗಳ ಚೇತರಿಕೆಯ ಪ್ರಮಾಣ ಹೆಚ್ಚಿ, ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೋಗಿಗಳನ್ನು ಸೋಂಕು ತಗುಲಿದ ಕೂಡಲೇ ಆಸ್ಪತ್ರೆಗೆ ಸೇರಿಸುವುದು,ಸರಿಯಾದ ಚಿಕಿತ್ಸೆ ಸಿಗುವಂತೆ ಮಾಡುವುದರಿಂದ ಮಾತ್ರವೇ ಸೋಂಕಿನ ಪ್ರಮಾಣ ಕಡಿಮೆಯಾಗಲು ಸಾಧ್ಯ. ಕೊರೋನಾ ಪರೀಕ್ಷಾ ಮಾದರಿಗಳ ವರದಿಗಳು ಶೀಘ್ರ ಕೈ ಸೇರಿದ ಪಕ್ಷದಲ್ಲಿ ಮಾತ್ರ ಸೋಂಕಿತರನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸುವುದು ಸಾಧ್ಯವಾಗುತ್ತದೆ. ಜೊತೆಗೆ ಕೊರೋನಾ ಸೋಂಕು ರೋಗಿಯಲ್ಲಿ ಯಾವ ಘಟ್ಟದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಇದು ವೈದ್ಯರಿಗೆ ಸಹಾಯ ಮಾಡಲಿದೆ. ಆರಂಭ ಮತ್ತು ಮಧ್ಯಮ ಘಟ್ಟದಲ್ಲಿರುವ ಸೋಂಕಿತರಿಗಿಂತ ಹೆಚ್ಚಿನ ಪ್ರಮಾಣದ ಭಿನ್ನವಾದ ಚಿಕಿತ್ಸೆ ತೀವ್ರ ಆರೋಗ್ಯ ಸಮಸ್ಯೆ ಎದುರಿಸುವ ರೋಗಿಗಳಿಗೆ ಅಗತ್ತವಿದ್ದು ಈ ನಿಟ್ಟಿನಲ್ಲಿಯೂ ಆರ್ಟಿಪಿಸಿಆರ್ ಕ್ರಮ ಉಪಯುಕ್ತವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.