ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ಅಪಹರಣಗೊಂಡಿದ್ದ ಬಿಜೆಪಿ ನಾಯಕ ಮೆಹರಾಜ್ದ್ದಿನ್ ಮಲ್ಲಾ ಅವರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಇವರು ವಾಟರ್ ಗಮ್ ಮಹಾನಗರ ಪಾಲಿಕೆಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ಸ್ಥಳೀಯ ಬಿಜೆಪಿ ನಾಯಕರಾಗಿದ್ದಾರೆ.
ಬಾರಮುಲ್ಲಾ ಜಿಲ್ಲೆಯ ಸೊಪೋರದ ರಫಿಯಾಬಾದ್ ಪ್ರದೇಶದ ಮರಝಿಗುಂಡ್ನಲ್ಲಿಇವರನ್ನು ಉಗ್ರರು ಅಪಹರಣಗೊಳಿಸಿದ್ದರು. ಅಪಹರಣಗೊಂಡ 12 ಗಂಟೆಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಸುರಕ್ಷಿತವಾಗಿ ಅವರು ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ತನ್ನ ಸ್ನೇಹಿತನನ್ನು ಭೇಟಿಯಾಗುವ ಸಲುವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರನ್ನು ಸ್ಯಾಂಟ್ರೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಉಧಮ್ ಪುರದ ಬಿಜೆಪಿ ಸಂಸದ ಜಿತೇಂದ್ರ ಸಿಂಗ್ ಅವರು, “ಅಪಹರಣಗೊಂಡಿದ್ದ ನಮ್ಮ ಸಹೋದ್ಯೋಗಿ ಮೆಹರಾಜ್ದ್ದೀನ್ ಮಲ್ಲಾ ಅವರು ಸುರಕ್ಷಿತವಾಗಿ ಹಿಂದಿರುಗಿದ್ದಾರೆ” ಎಂದಿದ್ದಾರೆ.
“ಭದ್ರತಾ ಪಡೆಗಳಿಗೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಈ ಶ್ರೇಯಸ್ಸು ಸಲ್ಲಬೇಕು. ಸಮಯ ಸಿಕ್ಕಾಗಲೆಲ್ಲಾ ಭದ್ರತಾ ಪಡೆಗಳ ಮೇಲೆ ವಿನಾಕಾರಣ ಟೀಕಾಪ್ರಹಾರವನ್ನೇ ನಡೆಸುವ ಕಾಶ್ಮೀರದ ಕೆಲವರು ಈಗ ಎಲ್ಲಿದ್ದಾರೆ” ಎಂದು ಅವರು ಪ್ರಶ್ನಿಸಿದ್ದಾರೆ.
THE TIMES OF INDIA: BJP worker kidnapped in J&K back home safe: Dr Jitendra Singh
READ more.https://t.co/oBFo5ec1er pic.twitter.com/m0DhcHjONW— Dr Jitendra Singh (@DrJitendraSingh) July 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.