ಜಶ್ಪುರ: ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷರಾದ ಜಗದೇವ ರಾಮ್ಜೀ ಉರಾಂವ್ ಅವರು ಬುಧವಾರ ಮಧ್ಯಾಹ್ನ 3 ಗಂಟೆಗೆ ಛತ್ತೀಸ್ಗಢ ಜಶ್ಪುರ ನಗರದ ಆಶ್ರಮದ ಪ್ರಧಾನ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 72 ವರ್ಷವಾಗಿತ್ತು. ಅವರು ಆಶ್ರಮದ ಪ್ರಧಾನ ಕಛೇರಿಯಿಂದ 3 ಕಿ.ಮೀ ದೂರದಲ್ಲಿರುವ ಉರಾಂವ್ನ ಕೊಮಡೊ ಎಂಬ ಗ್ರಾಮದವರು. ಅವರಿಗೆ 3 ಸಹೋದರರು ಮತ್ತು 2 ಸಹೋದರಿಯರು ಇದ್ದಾರೆ.
ಜಗದೇವ ರಾಮ್ ಜಿ ಅವರು ಕಳೆದ ಎರಡು ವರ್ಷಗಳಿಂದ ಮೂತ್ರಪಿಂಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು.
ಸಂಸ್ಥಾಪಕ ಅಧ್ಯಕ್ಷ ವನ್ಯೋಗಿ ಬಾಲಸಹಾಬ್ ದೇಶಪಾಂಡೆ ಅವರ ನಿಧನದ ನಂತರ 1995ರಿಂದ ಜಗದೇವ ರಾಮ್ಜಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಅವರು 1968ರಲ್ಲಿ ಜಶ್ಪುರದಲ್ಲಿ ಕಲ್ಯಾಣ ಆಶ್ರಮ ನಡೆಸುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದ್ದರು. ಎಂಭತ್ತರ ದಶಕದಲ್ಲಿ ಕಲ್ಯಾಣ್ ಆಶ್ರಮವು ತನ್ನ ಜಾಲವನ್ನು ಭಾರತದಾದ್ಯಂತ ವಿಸ್ತರಿಸಿದಾಗ ಅವರು ದೇಶಪಾಂಡೆ ಜಿ ಅವರೊಂದಿಗೆ ರಾಷ್ಟ್ರವ್ಯಾಪಿ ಪ್ರವಾಸ ನಡೆಸಿದರು. ಅವರು ಅನೇಕ ವರ್ಷಗಳಿಂದ ಕಲ್ಯಾಣ್ ಆಶ್ರಮದ ಉಪಾಧ್ಯಕ್ಷರಾಗಿದ್ದರು ಮತ್ತು ನಂತರ ಅವರನ್ನು 1993 ರಲ್ಲಿ ಕಟಕ್ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ಏರಿಸಲಾಯಿತು.
ಅವರು ವಿವಿಧ ಚಟುವಟಿಕೆಗಳನ್ನು ನಡೆಸಲು ಮುನ್ನಲೆಯಲ್ಲಿ ನಿಂತು ನೇತೃತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿಯೇ ಜನಜಾತಿ ಕುರಿತ ದೃಷ್ಟಿ ದಾಖಲೆಯನ್ನು ಹೊರ ತರಲಾಗಿತ್ತು. ಪ್ರತಿವರ್ಷ ಜನಜಾತಿ ಯುವಕರಿಗೆ ಕ್ರೀಡಾ ಉತ್ಸವಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಶಬರಿ ಕುಂಭ, ಪ್ರಯಾಗರಾಜ್ ಕುಂಭಾ ಮೇಳದಲ್ಲಿ ಮತ್ತು ಉಜ್ಜಯಿನಿಯಲ್ಲಿ ಸಿನ್ಹಾಸ್ತ್ ಕುಂಭಾದಲ್ಲಿ ವನವಾಸಿ ಸಂಸ್ಕೃತ ಕಾರ್ಯಕ್ರಮಗಳು, 2003 ರಲ್ಲಿ ಜಬುವಾದಲ್ಲಿ ವನವಾಸಿ ಸಮ್ಮೇಳನ, ಭೋಪಾಲ್ನ ಮಖನ್ ಲಾಲ್ ಚತುರ್ವೇದಿ ಪತ್ರಕಾರಿತ ವಿಶ್ವವಿದ್ಯಾಲಯದ ಜಂಟಿಯಾಗಿ ಆಯೋಜಿಸಲಾದ “ವನವಾಸಿಗಳ ಚಿತ್ರ ಮತ್ತು ವಾಸ್ತವ” ಕುರಿತ ವಿಚಾರ ಸಂಕಿರಣ ಇವರು ಅವಧಿಯಲ್ಲಿ ನಡೆದ ಕೆಲವು ಚಟುವಟಿಕೆಗಳು.
ಕಲ್ಯಾಣ ಆಶ್ರಮವು ಅವರ ನಾಯಕತ್ವದಲ್ಲಿ ಅಗತ್ಯವಿರುವವರಿಗೆ ಅನೇಕ ಸೇವಾ ಚಟುವಟಿಕೆಗಳು ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಕಲ್ಯಾಣ ಆಶ್ರಮವು ಸುಮಾರು 500 ಜನಜತಿ ಸಮುದಾಯಗಳನ್ನು ಒಳಗೊಂಡ ರಾಷ್ಟ್ರವ್ಯಾಪಿ ಸಂಘಟನೆಯಾಗಿ ಬೆಳೆದಿದೆ. ಈಗ ಆಶ್ರಮದ ಕಾರ್ಯವು 50000 ಕ್ಕೂ ಹೆಚ್ಚು ಗ್ರಾಮಗಳನ್ನು ವಿಸ್ತರಿಸಿದೆ ಮತ್ತು ಭಾರತದಾದ್ಯಂತ 14000 ಹಳ್ಳಿಗಳಲ್ಲಿ 20000 ಕ್ಕೂ ಹೆಚ್ಚು ಯೋಜನೆಗಳನ್ನು ನಡೆಸುತ್ತಿದೆ.
ಅವರ ನಿಧನವು ದೇಶಾದ್ಯಂತ ಆಘಾತ ಮತ್ತು ದುಃಖವನ್ನು ತಂದಿದೆ. ಅವರ ಕೊನೆಯ ವಿಧಿಗಳನ್ನು ಇಂದು ಜಶ್ಪುರದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.