ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಪಾಲುದಾರಿಕೆಯು ಕರೋನವೈರಸ್ ಸಂಕ್ರಾಮಿಕ ರೋಗದಿಂದಾಗಿ ಜಾಗತಿಕವಾಗಿ ಉದ್ಭವವಾಗಿರುವ ಹೊಸ ಸಮಸ್ಯೆಗಳನ್ನು ಎದುರಿಸುವಲ್ಲಿ ಮತ್ತು ಆರ್ಥಿಕ ಪುನಶ್ಚೇತನದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಿಸಿದ್ದಾರೆ.
15ನೇ ಭಾರತ -ಇಯು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಒತ್ತಿ ಹೇಳಿದರು.
“ಕರೋನವೈರಸ್ ಕಾಣಿಸಿಕೊಂಡ ಬಳಿಕ ಹೊಸ ಆರ್ಥಿಕ ಸಮಸ್ಯೆಗಳು ಜಾಗತಿಕವಾಗಿ ಸೃಷ್ಟಿಯಾಗಿವೆ. ಇದಕ್ಕಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ನನಗೆ ಅನಿಸುತ್ತಿದೆ. ನಿಯಮ ಆಧಾರಿತ ಅಂತರರಾಷ್ಟ್ರೀಯ ಆದೇಶದಲ್ಲಿ ವಿಭಿನ್ನ ರೀತಿಯ ಒತ್ತಡಗಳಿವೆ. ಹೀಗಾಗಿ ಭಾರತ-ಯುರೋಪಿಯನ್ ಪಾಲುದಾರಿಕೆಯು ಆರ್ಥಿಕ ಪುನರ್ನಿರ್ಮಾಣ ಮತ್ತು ಮಾನವಕೇಂದ್ರಿತ ಹಾಗೂ ಮಾನವಕೇಂದ್ರಿತ ಜಾಗತೀಕರಣದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಲಿದೆ” ಎಂದಿದ್ದಾರೆ.
“ಪ್ರಸ್ತುತ ಸವಾಲುಗಳ ನ್ನು ಹೊರತುಪಡಿಸಿ, ಹವಾಮಾನ ಬದಲಾವಣೆಯಂತಹ ಸುದೀರ್ಘ ಕಾಲದ ಸವಾಲುಗಳಿಗೂ ಭಾರತ ಮತ್ತು ಯುರೋಪ್ ಆದ್ಯತೆಯನ್ನು ನೀಡುತ್ತವೆ. ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳ ಹಿನ್ನೆಲೆಯಲ್ಲಿ ನಾವು ಯುರೋಪಿನಿಂದ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಹ್ವಾನಿಸುತ್ತಿದ್ದೇವೆ” ಎಂದಿದ್ದಾರೆ.
“ಭಾರತ- ಇಯು ಪ್ರಜಾಪ್ರಭುತ್ವ, ಬಹುತ್ವ, ಒಳಗೊಳ್ಳುವಿಕೆ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಗೌರವ, ಬಹುಪಕ್ಷೀಯತೆ, ಸ್ವಾತಂತ್ರ್ಯ, ಪಾರದರ್ಶಕತೆ ಮುಂತಾದ ಸಾರ್ವತ್ರಿಕ ಮೌಲ್ಯಗಳನ್ನು ಪರಸ್ಪರ ಹಂಚಿಕೊಳ್ಳುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.