ಅಹ್ಮದಾಬಾದ್: ಅಂಕಗಳು ಜೀವನದಲ್ಲಿ ಎಲ್ಲವೂ ಆಗಿರುವುದಿಲ್ಲ. ಜೀವನ ಅಂಕಗಳಿಗಿಂತಲೂ ಮಿಗಿಲಾದುದು ಎಂಬ ಮಾತುಗಳನ್ನು ನಾವು ಕೇಳುತ್ತಲೇ ಬೆಳೆದಿರುತ್ತವೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಭಿನ್ನವೇ ಆಗಿರುತ್ತದೆ. ಅನೇಕ ಬಾರಿ ನಾವು ಪಡೆದುಕೊಂಡ ಅಂಕಗಳಿಂದಲೇ ನಮ್ಮನ್ನು ಸಮಾಜದಲ್ಲಿ ಅಳೆಯಲಾಗುತ್ತದೆ. ನಮ್ಮ ಬುದ್ಧಿವಂತಿಕೆಯನ್ನು ಕೂಡ ಅಂಕಗಳಿಂದಲೇ ಅಳೆಯಲಾಗುತ್ತದೆ.
ಸಮಾಜದ ಈ ಧೋರಣೆಯ ಪರಿಣಾಮವಾಗಿಯೇ ಪರೀಕ್ಷೆ ಬರೆಯುವ ಮಕ್ಕಳು ಒತ್ತಡಕ್ಕೆ ಸಿಲುಕುತ್ತಾರೆ. ಹೆಚ್ಚು ಅಂಕಗಳು ಬರಲಿ ಎಂಬ ಕಾರಣಕ್ಕೆ ಇನ್ನಿಲ್ಲದಂತೆ ಪರಿತಪಿಸುತ್ತಾರೆ. ಪರೀಕ್ಷೆಯಲ್ಲಿ ತುಸು ಅಂಕ ಹೆಚ್ಚು ಕಮ್ಮಿ ಬಂದರೂ ಜೀವನವೇ ಹೋಯಿತು ಎನ್ನುವ ಮಟ್ಟಕ್ಕೆ ಅವರು ಚಿಂತಾಕ್ರಾಂತರಾಗುತ್ತಾರೆ.
ಇಂತಹ ಸಂದರ್ಭದಲ್ಲಿ, ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳು ಬರುತ್ತಿರುವ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ತಮ್ಮ 12ನೇ ಸಿಬಿಎಸ್ ಇ ಅಂಕ ಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅತ್ಯುನ್ನತ ಹುದ್ದೆಯನ್ನು ಹೊಂದಲು ಅಂಕ ಯಾವತ್ತೂ ಅಡ್ಡಿಯಲ್ಲ ಎಂಬುದನ್ನು ಇಂದಿನ ಮಕ್ಕಳಿಗೆ ತೋರಿಸಿಕೊಟ್ಟಿದ್ದಾರೆ.
ನಿತಿನ್ ಸಂಗ್ವಾನ್ ಐಎಎಸ್ ಅಧಿಕಾರಿ ಟ್ವಿಟರ್ ಮೂಲಕ ತಮ್ಮ ಅಂಕಪಟ್ಟಿಯನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಕೆಮೆಸ್ಟ್ರಿ ವಿಭಾಗದಲ್ಲಿ ಪಡೆದುಕೊಂಡ ಅಂಕ ಕೇವಲ 24. ಆದರೂ ಇಂದು ಅವರು ದೊಡ್ಡ ಅಧಿಕಾರಿಯಾಗಿ ಸಮಾಜದಲ್ಲಿ ಗೌರವದ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಡೆಪ್ಯೂಟಿ ಮುನ್ಸಿಪಲ್ ಕಮಿಷನರ್ ಆಗಿರುವ ಅವರು, ಅಹ್ಮದಾಬಾದ್ ಸ್ಮಾರ್ಟ್ ಸಿಟಿ ಯೋಜನೆಯ ಸಿಇಓ ಕೂಡ ಆಗಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಹನ್ನೆರಡನೇ ತರಗತಿಯಲ್ಲಿ ಕೆಮಿಸ್ಟ್ರಿಯಲ್ಲಿ ನನಗೆ ಸಿಕ್ಕಿದ್ದು ಕೇವಲ 24 ಅಂಕ. ಅಂದರೆ ಉತ್ತಿರ್ಣ ಆಗಲು ಬೇಕಿದ್ದ ಅಂಕಗಳಿಗಿಂತ 1 ಅಂಕ ಹೆಚ್ಚು. ಆದರೆ ಅದು ನಾನು ಬದುಕಿನಲ್ಲಿ ಏನಾಗಬೇಕು ಎಂಬುದನ್ನು ನಿರ್ಧರಿಸಲಿಲ್ಲ” ಎಂದಿದ್ದಾರೆ.
ಅಂಕಗಳ ಒತ್ತಡದಲ್ಲಿ ಯಾವತ್ತು ಕುಸಿದು ಹೋಗಬೇಡಿ, ಬದುಕು ಬೋರ್ಡ್ ರಿಸಲ್ಟ್ ಗಿಂತ ಹೆಚ್ಚು. ಫಲಿತಾಂಶಗಳು ಪರಾಮರ್ಶೆಗೆ ಇರುವ ಅವಕಾಶವೇ ಹೊರತು ಟೀಕೆಗೆ ಅಲ್ಲ” ಎಂದಿದ್ದಾರೆ.
In my 12th exams, I got 24 marks in Chemistry – just 1 mark above passing marks. But that didn't decide what I wanted from my life
Don't bog down kids with burden of marks
Life is much more than board results
Let results be an opportunity for introspection & not for criticism pic.twitter.com/wPNoh9A616
— Nitin Sangwan, IAS (@nitinsangwan) July 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.