ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಉದ್ಭವವಾದ ಸಂಕಷ್ಟ ವಿಶ್ವ ಸಂಸ್ಕೃತಿಯ ಜೊತೆ ಜೊತೆಗೆ ಉದ್ಯೋಗದ ಸ್ವಭಾವವನ್ನೂ ಬದಲಾಯಿಸಿದೆ, ಇಂತಹ ಸಂದರ್ಭದಲ್ಲಿ ಪ್ರಸ್ತುತವಾಗಿರಲು ಹೊಸ ಹೊಸ ಕೌಶಲ್ಯಗಳನ್ನು ಸೇರ್ಪಡೆಗೊಳಿಸುವುದು, ಕೌಶಲ್ಯವನ್ನು ವೃದ್ಧಿಪಡಿಸುವುದು ಅತ್ಯಂತ ಅನಿವಾರ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿಪ್ರಾಯಿಸಿದ್ದಾರೆ.
ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಮಾತನಾಡಿದ ಮೋದಿ, “ಈ ಸಂಕಷ್ಟದ ಸಂದರ್ಭದಲ್ಲಿ ಬದಲಾಗುತ್ತಿರುವ ಉದ್ಯೋಗದ ಸ್ವಭಾವದ ಮೇಲೆ ತಂತ್ರಜ್ಞಾನ ಕೂಡ ಮಹತ್ವದ ಪ್ರಭಾವವನ್ನು ಬೀರುತ್ತದೆ. ಕೌಶಲ್ಯ, ಮರು ಕೌಶಲ್ಯ ಮತ್ತು ಕೌಶಲ್ಯ ವೃದ್ಧಿ ನಮಗೆ ಪ್ರಸ್ತುತವಾಗಿರಲು ಇರುವ ಏಕೈಕ ಮಂತ್ರವಾಗಿದೆ” ಎಂದಿದ್ದಾರೆ.
“ಹೊಸ ಕೌಶಲ್ಯ ಮತ್ತು ಮೌಲ್ಯವನ್ನು ಸೇರಿಸಿ ವಿಷಯಗಳನ್ನು ಕಲಿಯುವುದು, ಹೊಸದನ್ನು ಕಲಿಯುವ ಮೂಲಕ ಪ್ರತಿದಿನ ನಿಮ್ಮ ಕೌಶಲ್ಯಕ್ಕೆ ಸೇರ್ಪಡೆಗೊಳಿಸುವುದು, ನಮ್ಮ ಕೌಶಲ್ಯವನ್ನು ವೃದ್ಧಿಸುವುದು ಇಂದು ಅನಿವಾರ್ಯ. ಕೌಶಲ್ಯದ ಈ ಶಕ್ತಿಯು ವ್ಯಕ್ತಿಯನ್ನು ಎಲ್ಲಿಂದ ಎಲ್ಲಿಗೋ ಕೊಂಡೊಯ್ಯಬಲ್ಲದು. ಒರ್ವ ಯಶಸ್ವಿ ವ್ಯಕ್ತಿಯ ಅತೀ ದೊಡ್ಡ ಸಂಕೇತ ಏನಾಗಿರುತ್ತದೆ ಎಂದರೆ, ಆತ ತನ್ನ ಕೌಶಲ್ಯವನ್ನು ವೃದ್ಧಿಸುವ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ” ಎಂದಿದ್ದಾರೆ.
“ಇಂದು ಭಾರತದಲ್ಲಿ ಜ್ಞಾನ ಮತ್ತು ಕೌಶಲ್ಯ ಎರಡರ ನಡುವೆ ಇರುವ ಅಂತರವನ್ನು ಕುಗ್ಗಿಸಲಾಗುತ್ತುದೆ. 5 ವರ್ಷಗಳ ಹಿಂದೆ ಇದೇ ಚಿಂತನೆಯೊಂದಿಗೆ ಸ್ಕಿಲ್ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸಲಾಯಿತು. ಅದು ನಿರಂತರವಾಗಿ ಜಾರಿಯಲ್ಲಿದೆ. ಈ ಮಿಷನ್ ಅಡಿಯಲ್ಲಿ ದೇಶಾದ್ಯಂತ ನೂರಾರು ಪ್ರಧಾನಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಯಿತು. ಐಟಿಐಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು, ಲಕ್ಷಾಂತರ ಹೊಸ ಸೀಟುಗಳನ್ನು ಅವುಗಳಿಗೆ ಸೇರಿಸಲಾಯಿತು. ಈ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಜನರ ಕೌಶಲ್ಯ ಅಭಿವೃದ್ಧಿ ಮಾಡಲಾಗಿದೆ” ಎಂದಿದ್ದಾರೆ.
“ವಯಸ್ಸನ್ನೂ ಮೀರಿ ಕೌಶಲ್ಯವನ್ನು ಹೆಚ್ಚಿಸಿಕೊಂಡರೆ ಅದು ನಮ್ಮ ಜೀವನಕ್ಕೆ ಹೊಸ ಉತ್ಸಾಹ, ಹೊಸ ಪ್ರೇರಣೆ ಮತ್ತು ಹೊಸ ಶಕ್ತಿಯನ್ನು ತುಂಬಿಸುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.