ನವದೆಹಲಿ : ಇಂದು ನಡೆಯಲಿರುವ 15 ನೇ ಭಾರತ-ಇಯು ಶೃಂಗಸಭೆಯು ದೇಶದ ಆರ್ಥಿಕತೆ ಮತ್ತು ಯುರೋಪಿನೊಂದಿಗಿನ ಸಾಂಸ್ಕೃತಿಕ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿಪ್ರಾಯಿಸಿದ್ದಾರೆ.
“ಇಂದು ಸಂಜೆ 4: 30 ಕ್ಕೆ ಭಾರತ-ಇಯು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಈ ಶೃಂಗಸಭೆಯು ಯುರೋಪಿನೊಂದಿಗೆ ನಮ್ಮ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇಯು ಭಾರತದ ಅತಿದೊಡ್ಡ ವ್ಯಾಪಾರ ಮತ್ತು ಹೂಡಿಕೆ ಪಾಲುದಾರರಲ್ಲಿ ಒಂದಾಗಿದೆ ಆದರೆ ಇದು ಭಾರತದೊಂದಿಗೆ ಇನ್ನಷ್ಟು ಹೆಚ್ಚಿನ ವ್ಯಾಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ಬುಧವಾರ ಭಾರತ-ಇಯು ವರ್ಚುವಲ್ ಶೃಂಗಸಭೆಗೆ ಮುಂಚಿತವಾಗಿ ತಿಳಿಸಿವೆ ಮತ್ತು ಸಮಗ್ರ ವಿದೇಶಿ ವ್ಯಾಪಾರ ಒಪ್ಪಂದವನ್ನು ಅಭಿವೃದ್ಧಿಪಡಿಸುವಲ್ಲಿ ಎರಡೂ ಕಡೆಯವರು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಉಲ್ಲೇಖ ಮಾಡಿವೆ. ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಎರಡೂ ಕಡೆಯವರಿಗೆ ಹೆಚ್ಚಿನ ಸಾಮರ್ಥ್ಯವಿದೆ ಎಂದು ಹೇಳಿವೆ.
ಬ್ರೆಕ್ಸಿಟ್ ಹೊರತಾಗಿಯೂ ಯುರೋಪಿಯನ್ ಯೂನಿಯನ್ ಭಾರತದ ಅತಿದೊಡ್ಡ ವ್ಯಾಪಾರ ಮತ್ತು ಹೂಡಿಕೆ ಪಾಲುದಾರರಲ್ಲಿ ಒಂದಾಗಿದೆ ಮತ್ತು ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉಭಯ ದೇಶಗಳು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಇಯು ಮೂಲಗಳು ತಿಳಿಸಿವೆ. ಇಂದು ಶೃಂಗಸಭೆ ಸಭೆಯಲ್ಲಿ ಹವಾಮಾನ ತಟಸ್ಥತೆಯನ್ನು ಸಾಧಿಸಲು “ಸಮತೋಲಿತ ಮತ್ತು ಸಮಗ್ರ ಎಫ್ಟಿಎ” ಮತ್ತು ಇಂಧನ ಸಹಕಾರದ ಬಗ್ಗೆ ಉಭಯ ಪಕ್ಷಗಳು ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಪ್ರಧಾನಿ ಮೋದಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
Will take part in the India-EU Summit at 4:30 PM today. I am confident this Summit will further strengthen our economic as well as cultural linkages with Europe.
— Narendra Modi (@narendramodi) July 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.