ತಿರುವನಂತಪುರಂ: ಕೇರಳದ ಅಕ್ರಮ ಚಿನ್ನ ಸಾಗಾಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ, ಭಯೋತ್ಪಾದನೆಗೆ ಅನುದಾನ ನೀಡುವ ಸಲುವಾಗಿ ಈ ಅಕ್ರಮ ಕಾರ್ಯವನ್ನು ನಡೆಸಿರುವ ಸಾಧ್ಯತೆ ಇದೆ ಎಂದಿದೆ. ಮಾತ್ರವಲ್ಲದೇ, ಕಳೆದ 10 ತಿಂಗಳಲ್ಲಿ ಸುಮಾರು 150 ಕೆಜಿ ಬಂಗಾರವನ್ನು ಕಳ್ಳ ಸಾಗಾಣೆ ಮಾಡಲಾಗಿದೆ ಎಂದಿದೆ.
ಎನ್ಐಎ ನ್ಯಾಯಾಲಯ ಸೋಮವಾರ ಪ್ರಕರಣದ ಪ್ರಮುಖ ಶಂಕಿತರಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಜುಲೈ 21ರವರೆಗೆ ಎನ್ಐಎ ಕಸ್ಟಡಿಗೆ ನೀಡಿದೆ. ಪ್ರಕರಣದ ಭಯೋತ್ಪಾದಕ ಆಯಾಮದ ತನಿಖೆಗಾಗಿ ಇಬ್ಬರನ್ನು ವಶಕ್ಕೆ ನೀಡುವಂತೆ ಕೋರಿಲಾಗಿತ್ತು. ಈ ಪ್ರಕರಣದಲ್ಲಿ ಭಯೋತ್ಪಾದಕ ಫಂಡಿಂಗ್ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ.
ಆರೋಪಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆಯನ್ನು ಸೂಚಿಸುವ ಯುಎಪಿಎ ಸೆಕ್ಷನ್ 16 ಮತ್ತು 17 ರ ನಿಬಂಧನೆಗಳನ್ನು ಎನ್ಐಎ ಸೂಚಿಸುವ ಸಾಧ್ಯತೆಯಿದೆ.
ಈ ಹಿಂದೆ ಯುಎಇ ಕಾನ್ಸುಲೇಟ್ನ ಉದ್ಯೋಗಿಗಳಾಗಿದ್ದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಅಕ್ರಮ ಚಿನ್ನ ಸಾಗಾಣೆ ಮಾಡಿದ್ದಾರೆ ಎಂದು ಕೊಚ್ಚಿ ಮೂಲದ ಎನ್ಐಎ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಕಳ್ಳ ಸಾಗಾಣೆಯಾದ ಚಿನ್ನವನ್ನು ಜ್ಯುವೆಲ್ಲರಿ ಅಂಗಡಿಗೆ ಒಯ್ಯಲಾಗಿದೆ ಎಂಬ ಶಂಕೆ ಇತ್ತು, ಆದರೀಗ ಎನ್ಐಎ ತನಿಖೆ ಭಯೋತ್ಪಾದಕ ಆಯಾಮವನ್ನು ತೆರೆದಿಟ್ಟಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಮೂಲದ ಕೆ ಟಿ ರಮೀಜ್ ಎಂಬಾತನನ್ನು ಕಸ್ಟಮ್ಸ್ ವಿಶೇಷ ತನಿಖಾ ತಂಡವು ಭಾನುವಾರ ಬಂಧಿಸಿರುವುದು ತನಿಖೆಯ ಪ್ರಗತಿಗೆ ಮತ್ತಷ್ಟು ಸಹಾಯ ಮಾಡುವ ಸಾಧ್ಯತೆ ಇದೆ.
ಕೇರಳದ ಚಿನ್ನದ ಕಳ್ಳಸಾಗಣೆ ದಂಧೆಯ ಕಿಂಗ್ಪಿನ್ ಎಂದು ನಂಬಲಾದ ರಮೀಜ್ನನ್ನು ಭಾನುವಾರ ಮುಂಜಾನೆ ಪೆರಿಂಥಾಲ್ಮಣ್ಣ ಬಳಿಯ ವೆಟ್ಟತೂರ್ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಯಿತು.
ಈ ಪ್ರಕರಣ ಕೇರಳ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಸ್ವಪ್ನಾ ಸುರೇಶ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಪ್ತವಾಗಿದ್ದಳು ಎಂಬುದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.