ನವದೆಹಲಿ: ಜಮ್ಮು-ಕಾಶ್ಮೀರದ ವಿದ್ಯುತ್ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನವನ್ನು ನೀಡುವ ಸಲುವಾಗಿ, ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ಸೋಮವಾರ ಶ್ರೀನಗರ, ಶೋಪಿಯಾನ್, ಅನಂತ್ನಾಗ್, ಬುದ್ಗಾಂ ಮತ್ತು ಕುಲ್ಗಂ ಜಿಲ್ಲೆಗಳಿಗೆ 19.51 ಕೋಟಿ ರೂ.ಗಳ 10 ವಿದ್ಯುತ್ ಯೋಜನೆಗಳ ಇ-ಉದ್ಘಾಟನೆಯನ್ನು ನೆರವೇರಿಸಿದರು.
ಮಾತ್ರವಲ್ಲದೇ, ಶ್ರೀನಗರ, ಪುಲ್ವಾಮಾ, ಅನಂತ್ನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಿಗೆ 30.35 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಯೋಜನೆಗಳಿಗೆ ಶಿಲಾನ್ಯಾಸವನ್ನು ನೆರವೇರಿಸಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, “ಈ ಯೋಜನೆಗಳ ಇ-ಉದ್ಘಾಟನೆಯ ಸಮಯದಲ್ಲಿ, ಲೆಫ್ಟಿನೆಂಟ್ ಗವರ್ನರ್ ಅವರು ಹೊಸ ಯೋಜನೆಗಳನ್ನು ಪ್ರಾರಂಭಿಸುವುದರೊಂದಿಗೆ, ಚಳಿಗಾಲದ ಅವಧಿಯಲ್ಲಿ ಕಾಶ್ಮೀರದಲ್ಲಿ ವಿದ್ಯುತ್ ಕಡಿತವನ್ನು 6-8 ಗಂಟೆಗಳವರೆಗೆ ಕಡಿಮೆ ಮಾಡುವ ಬಗ್ಗೆ ಅಧಿಕಾರಿಗಳು ಸೂಚಿಸಿದರು”.
“ಚಳಿಗಾಲದ ಅವಧಿಯಲ್ಲಿ, ಕಾಶ್ಮೀರ ವಿಭಾಗದ ಕೆಲವು ಭಾಗಗಳಲ್ಲಿ 12-16 ಗಂಟೆಗಳ ವಿದ್ಯುತ್ ಕಡಿತವನ್ನು ಮಾಡಲಾಗುತ್ತಿತ್ತು. 12 ಸ್ವೀಕರಿಸುವ ಕೇಂದ್ರಗಳನ್ನು ನಿಯೋಜಿಸುವುದು ವಿತರಣಾ ಕಡೆಯಿಂದ ಸಾಮರ್ಥ್ಯದ ಅಡಚಣೆಯನ್ನು ಸುಧಾರಿಸಲು ಒಂದು ಉತ್ತಮ ಹಾದಿಯಾಗಿದೆ” ಎಂದು ಅದು ಹೇಳಿದೆ.
ಹೊಸದಾಗಿ ಉದ್ಘಾಟಿಸಿದ ಯೋಜನೆಗಳು ಕಾಶ್ಮೀರದಾದ್ಯಂತ ಸುಮಾರು 35,000 ಮನೆಗಳಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ವಿದ್ಯುತ್ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯ ದೊಡ್ಡ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು 2 ಗಂಟೆಗಳಿಗಿಂತ ಹೆಚ್ಚಿನ ವಿದ್ಯುತ್ ಕಡಿತವಿಲ್ಲದೆ ಗ್ರಾಹಕರಿಗೆ ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಒದಗಿಸುವ ಮಧ್ಯಮ ಅವಧಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗಿದೆ ಎಂದು ಮುರ್ಮು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ನವೆಂಬರ್ 2020ಕ್ಕೆ 7 ಯೋಜನೆಗಳನ್ನು ಪೂರ್ಣಗೊಳಿಸಲು ಗಡುವು ವಿಧಿಸಿದ್ದಾರೆ. ಡಿಸೆಂಬರ್ 2021 ರಿಂದ ಮೇ 2021 ರವರೆಗೆ ಎರಡು ವಿದ್ಯುತ್ ಯೋಜನೆಗಳ ಪೂರ್ಣಗೊಳಿಸುವ ಗುರಿಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.