ನವದೆಹಲಿ: ಭಾರತವು ಕೊರೋನಾ ಸೊಂಕಿನ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸುತ್ತಿದೆ. ಈ ಹೋರಾಟದಲ್ಲಿ ಭದ್ರತಾ ಪಡೆಗಳ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಆಯೋಜಿಸಿದ್ದ ಅಖಿಲ ಭಾರತ ಬೃಹತ್ ಸಸ್ಯೋತ್ಸವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ಸಶಸ್ತ್ರ ಪಡೆಗಳು ದೇಶದಾದ್ಯಂತ ಸುಮಾರು 1.37 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲು ತೀರ್ಮಾನಿಸಿವೆ. ನಾವು ನೈಸರ್ಗಿಕವಾಗಿ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲ. ಅವುಗಳನ್ನು ಉಳಿಸಿ, ಬೆಳೆಸುವತ್ತಲೂ ಗಮನ ಹರಿಸಬೇಕು. ಹಾಗಾದಲ್ಲಿ ಮಾತ್ರ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಮತೋಲನ ಸಾಧಿಸಲು ಸಾಧ್ಯವಿದೆ. ಮರಗಳು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿ ಸ್ವಸ್ಥ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಪ್ರಾಕೃತಿಕ ಸಂಪನ್ಮೂಲಗಳ ಕೊರತೆಯಿಂದ ಓಝೋನ್ ಪದರವೂ ಹಾನಿಗೊಳಗಾಗುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ದೇಶದ ಭದ್ರತಾ ಪಡೆಗಳು ಕೇವಲ ಉಗ್ರರ ವಿರುದ್ಧವಷ್ಟೇ ಅಲ್ಲದೆ ಕೊರೋನಾ ಸೋಂಕಿನ ವಿರುದ್ಧವೂ ಯಶಸ್ವಿಯಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತವು ಜನಸಂಖ್ಯೆಯ ವಿಚಾರದಲ್ಲಿ ವಿಶ್ವದ ಎರಡನೇಯ ಅತೀ ದೊಡ್ಡ ರಾಷ್ಟ್ರವಾಗಿದ್ದು, ಕೊರೋನಾ ಸೋಂಕಿನ ವಿರುದ್ಧ ಹೋರಾಡುವುದು ಸವಾಲಿನ ಕೆಲಸವೇ ಸರಿ. ಇಂತಹ ಸವಾಲನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಡೀ ದೇಶವೇ ಒಗ್ಗಟ್ಟಾಗಿ ಎದುರಿಸುವ ಮೂಲಕ ಯಶಸ್ವಿಯಾಗುತ್ತಿದೆ. ಸೋಂಕಿನ ವಿರುದ್ಧ ಭಾರತ ಹೋರಾಡುತ್ತಿರುವ ವಿಧಾನಕ್ಕೆ ಜಗತ್ತೇ ಬೆರಗಾಗಿದೆ ಎಂದೂ ಶಾ ತಿಳಿಸಿದ್ದಾರೆ.
ದೇಶದ ಯೋಧರು ಕೊರೋನಾ ಸಂದರ್ಭದಲ್ಲಿಯೂ ತಮ್ಮ ಸೇವೆಯನ್ನು ದೇಶಕ್ಕೆ ನೀಡಿದ್ದಾರೆ. ಆ ಮೂಲಕ ಭಾರತವನ್ನು ಕೊರೋನಾ ಮುಕ್ತ ದೇಶವನ್ನಾಗಿ ಮಾಡುವಲ್ಲಿಯೂ ಯೋಧರ ಶ್ರಮ ವಂದನೀಯ. ದೇಶಕ್ಕೆ ಸವಾಲೊದಗಿದ ಸಂದರ್ಭದಲ್ಲಿ, ಯಾವುದೇ ಕಠಿಣ ಸ್ಥಿತಿಯಲ್ಲಿಯೂ ದೇಶವನ್ನು, ಇಲ್ಲಿನ ಜನರನ್ನು ರಕ್ಷಿಸಲು ಭಾರತದ ಭದ್ರತಾ ಪಡೆಗಳು ಸನ್ನದ್ಧ ವಾಗಿರುತ್ತವೆ ಎಂಬುದನ್ನು ಯೋಧರು ಸಾಬೀತು ಮಾಡಿದ್ದಾರೆ ಎಂದು ಶಾ ತಿಳಿಸಿದ್ದು, ಯೋಧರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.