ತಿರುವನಂತಪುರ: ಕೇರಳದಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದನ್ನು ಓಡಿ ಹೋಗಿ ತಡೆದು ನಿಲ್ಲಿಸಿ ಕಣ್ಣು ಕಾಣಿಸದ ವೃದ್ಧರನ್ನು ಬಸ್ಸಿಗೆ ಹತ್ತಿಸಿದ ಯುವತಿಯೋರ್ವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಅಂಧ ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಬಸ್ಗಾಗಿ ಕಾಯುತ್ತಿದ್ದು, ಈ ಸಂದರ್ಭದಲ್ಲಿ ಬಂದ ಸಾರಿಗೆ ಬಸ್ ವೃದ್ಧನನ್ನು ಹತ್ತಿಸಿಕೊಳ್ಳದೆ ಮುಂದಕ್ಕೆ ಚಲಿಸಿದೆ. ಇದೇ ಸಂದರ್ಭದಲ್ಲಿ ಓರ್ವ ಮಹಿಳೆ ಓಡಿ ಹೋಗಿ ಬಸ್ ನಿಲ್ಲಿಸುತ್ತಾರೆ, ಆ ಬಳಿಕ ಆ ವೃದ್ಧನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಬಸ್ಗೆ ಹತ್ತಿಸುತ್ತಾರೆ. ಈ ಘಟನೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಸದ್ಯ ಮಹಿಳೆಯ ಮಾನವೀಯತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದು ,ಈ ವಿಡಿಯೋ ಸಕತ್ ವೈರಲ್ ಆಗಿದೆ.
ಇನ್ನು ಅಂಧ ವೃದ್ಧನನ್ನು ಬಸ್ ಹತ್ತಿಸಿ ಮಾನವೀಯತೆ ಮೆರೆದ ಮಹಿಳೆಯನ್ನು ತಿರುವಳ್ಳಾ ಎಂಬಲ್ಲಿ ಬಟ್ಟೆ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುವ ಸುಪ್ರಿಯಾ ಎಂದು ಗುರುತಿಸಲಾಗಿದೆ. ಇನ್ನು ಈ ವಿಡಿಯೋ 41 ಸೆಕುಂಡುಗಳದ್ದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಒಂದೇ ಗಂಟೆಯಲ್ಲಿ 6.2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈ ವಿಡಿಯೋ ವನ್ನು ತಮಿಳುನಾಡಿನ ತಿರುಪತೂರ್ ನ ಎಸ್. ಪಿ. ವಿಜಯ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರಿಯ ಬಿಟ್ಟಿದ್ದಾರೆ. ಜೊತೆಗೆ ಸಮಾಜದಲ್ಲಿ ಬದುಕಲು ಮಾನವೀಯತೆ ಎಂಬುದು ಬಹಳ ಮುಖ್ಯ. ಅಂತಹ ಮಾನವೀಯ ಕಾರ್ಯವನ್ನು ಈ ಮಹಿಳೆ ಎತ್ತಿ ಹಿಡಿದಿದ್ದಾರೆ. ಬದುಕು ಸಾಗಿಸಲು ಈ ಪ್ರಪಂಚ ಬಳಹ ಸುಂದರವಾದ ಜಾಗ. ಮಹಿಳೆಯ ಕರುಣೆ ಮೆಚ್ಚುವಂತಹ ವಿಚಾರ ಎಂದೂ ಅವರು ತಿಳಿಸಿದ್ದಾರೆ.
she made this world a better place to live.kindness is beautiful!😍
உலகம் அன்பான மனிதர்களால் அழகாகிறது#kindness #love pic.twitter.com/B2Nea2wKQ4
— Vijayakumar IPS (@vijaypnpa_ips) July 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.