ನವದೆಹಲಿ: ಜಾಗತಿಕ ಪುನಃಶ್ಚೇತನದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಇಂಡಿಯಾ ಗ್ಲೋಬಲ್ ವೀಕ್ 2020 ವರ್ಚುವಲ್ ಸಮ್ಮೇಳನದ 1ನೇ ದಿನದಂದು ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ಮೋದಿ, “ಈ ಸಮಯದಲ್ಲಿ ಪುನಃಶ್ಚೇತನದ ಬಗ್ಗೆ ಮಾತನಾಡುವುದು ಸಹಜ. ಜಾಗತಿಕ ಪುನಃಶ್ಚೇತನ ಮತ್ತು ಭಾರತವನ್ನು ಪರಸ್ಪರ ಸಂಪರ್ಕಿಸುವುದು ಕೂಡ ಅಷ್ಟೇ ಸ್ವಾಭಾವಿಕ. ಜಾಗತಿಕ ಪುನಃಶ್ಚೇತನದ ಯಶೋಗಾಥೆಯಲ್ಲಿ ಭಾರತವನ್ನು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ” ಎಂದಿದ್ದಾರೆ.
ಜಾಗತಿಕ ಪುನಃಶ್ಚೇತನದಲ್ಲಿ ಭಾರತದ ಕೊಡುಗೆಗಾಗಿ ಮೋದಿ ಎರಡು ಅಂಶಗಳನ್ನು ಎತ್ತಿ ತೋರಿಸಿದರು. ಮೊದಲನೆಯದು ಭಾರತೀಯ ಪ್ರತಿಭೆ ಮತ್ತು ಎರಡನೆಯದು ಸುಧಾರಣೆ ಮತ್ತು ಪುನಃಶ್ಚೇತನಗೊಳಿಸುವ ಭಾರತದ ಸಾಮರ್ಥ್ಯ.
“ಪಂಚದಾದ್ಯಂತ, ಭಾರತದ ಪ್ರತಿಭಾ ಶಕ್ತಿಯ ಕೊಡುಗೆಯನ್ನು ನಾವು ನೋಡಿದ್ದೇವೆ. ಭಾರತೀಯ ಟೆಕ್ ಉದ್ಯಮ ಮತ್ತು ಟೆಕ್ ವೃತ್ತಿಪರರನ್ನು ಯಾರು ಮರೆಯಲು ಸಾಧ್ಯ! ಅವರು ದಶಕಗಳಿಂದ ದಾರಿ ತೋರಿಸುತ್ತಿದ್ದಾರೆ. ಭಾರತವು ಪ್ರತಿಭಾ ಶಕ್ತಿಯ ಕೇಂದ್ರ, ಅದು ಕೊಡುಗೆ ನೀಡಲು ಉತ್ಸುಕವಾಗಿದೆ. ಭಾರತೀಯರು ನೈಸರ್ಗಿಕ ಸುಧಾರಕರು. ಭಾರತವು ಸಾಮಾಜಿಕವಾಗಿರಲಿ ಅಥವಾ ಆರ್ಥಿಕವಾಗಿರಲಿ ಪ್ರತಿಯೊಂದು ಸವಾಲನ್ನು ಜಯಿಸಿದೆ ಎಂಬುದನ್ನು ಇತಿಹಾಸವು ತೋರಿಸಿದೆ ”ಎಂದು ಪ್ರಧಾನಿ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆಯನ್ನು ಮತ್ತೆ ಹಳಿಗೆ ತರುವ ತನ್ನ ಸಂಕಲ್ಪಕ್ಕೆ ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
“ಒಂದು ಕಡೆ ಭಾರತ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿದೆ. ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ನಾವು ಆರ್ಥಿಕತೆಯ ಆರೋಗ್ಯದ ಮೇಲೂ ಅಷ್ಟೇ ಗಮನ ಹರಿಸಿದ್ದೇವೆ ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಯಾವಾಗ ಭಾರತ ಪುನಃಶ್ಚೇತನದ ಬಗ್ಗೆ ಮಾತನಾಡುತ್ತದೆಯೋ, ಅದು ಕಾಳಜಿಯುಕ್ತ ಪುನಃಶ್ಚೇತನ, ಸಹಾನುಭೂತಿಯುಕ್ತ ಪುನಃಶ್ಚೇತನ, ಪರಿಸರ ಮತ್ತು ಆರ್ಥಿಕತೆ ಎರಡರ ಸುಸ್ಥಿರ ಪುನಃಶ್ಚೇತನವಾಗಿರುತ್ತದೆ. ಕಳೆದ 6 ವರ್ಷಗಳಲ್ಲಿ, ಭಾರತವು ಆರ್ಥಿಕ ಸೇರ್ಪಡೆ, ದಾಖಲೆಯ ವಸತಿ ಮತ್ತು ಮೂಲಸೌಕರ್ಯ ನಿರ್ಮಾಣ, ಸುಲಲಿತ ವ್ಯಾಪಾರ, ಜಿಎಸ್ಟಿ ಸೇರಿದಂತೆ ದಿಟ್ಟ ತೆರಿಗೆ ಸುಧಾರಣೆಗಳು, ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಉಪಕ್ರಮ – ಆಯುಷ್ಮಾನ್ ಭಾರತ್ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.