ನವದೆಹಲಿ: ಕೊರೊನಾವೈರಸ್ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಪಠ್ಯಕ್ರಮವನ್ನು ಕಡಿತಗೊಳಿಸಿರುವ ಕುರಿತು ಎದ್ದಿರುವ ವಿವಾದಗಳಿಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
9 ರಿಂದ 12 ನೇ ತರಗತಿಯವರೆಗೆ ಸುಮಾರು 190 ವಿಷಯಗಳಿಗೆ ಸಿಬಿಎಸ್ಇ ಪಠ್ಯಕ್ರಮವನ್ನು ಶೇಕಡಾ 30 ರವರೆಗೆ ಕಡಿತಗೊಳಿಸಿದೆ. ಪಠ್ಯಕ್ರಮದಲ್ಲಿನ ಕಡಿತವು 2020-21ರ ಶೈಕ್ಷಣಿಕ ವರ್ಷದ ಬೋರ್ಡ್ ಎಕ್ಸಾಂಗಳಿಗೆ ಮಾತ್ರ ಅನ್ವಯವಾಗುತ್ತದೆ.
“ಸಿಬಿಎಸ್ಇ ಪಠ್ಯಕ್ರಮದಿಂದ ಕೆಲವು ವಿಷಯಗಳನ್ನು ಹೊರಗಿಡುವುದಕ್ಕೆ ಸಂಬಂಧಿಸಿದಂತೆ ತಿಳುವಳಿಕೆಯಿಲ್ಲದ ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. ಈ ರೀತಿ ಮಾಡುವವರ ಸಮಸ್ಯೆ ಎಂದರೆ ಅವರು ಸುಳ್ಳು ನಿರೂಪಣೆಯನ್ನು ಸಾಬೀತುಪಡಿಸಲು ಆಯ್ದ ನಿರ್ದಿಷ್ಟ ವಿಷಯಗಳನ್ನಷ್ಟೇ ಮುಂದಿಟ್ಟು ಸಂವೇದನಾಶೀಲತೆ ರಹಿತರಾಗಿ ವರ್ತಿಸುತ್ತಾರೆ” ಎಂದು ನಿಶಾಂಕ್ ಟ್ವೀಟ್ ಮಾಡಿದ್ದಾರೆ.
ಪಠ್ಯವನ್ನು ಕಡಿತಗೊಳಿಸಿದ್ದು ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾತ್ರ. ಹೊರೆ ಕಡಿಮೆ ಮಾಡುವ ಉದ್ದೇಶವಷ್ಟೇ ಇದರ ಹಿಂದೆ ಇದೆ. ಪಠ್ಯಕ್ರಮವನ್ನು ಶೇಕಡಾ 30ರಷ್ಟು ಕಡಿಮೆ ಮಾಡುವ ಮೂಲಕ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಸಡಿಲಿಸುವುದು ಒಂದೇ ಇದರ ಗುರಿಯಾಗಿದೆ. ಸಲಹೆ ಮತ್ತು ಶಿಫಾರಸುಗಳನ್ನು ಅನುಸರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ವಿವಿಧ ತಜ್ಞರ ಮತ್ತು ನಮ್ಮ ಸಿಲೆಬಸ್ ಫಾರ್ ಸ್ಟುಡೆಂಟ್ಸ್ 2020 ಅಭಿಯಾನದ ಮೂಲಕ ಶಿಕ್ಷಣ ತಜ್ಞರಿಂದ ಪಡೆದ ಸಲಹೆಗಳನ್ನು ಪರಿಗಣಿಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅವರು ಅವರು ಸ್ಪಷ್ಟಪಡಿಸಿದ್ದಾರೆ.
ಸಿಬಿಎಸ್ಇ ಪ್ರಜಾಪ್ರಭುತ್ವ ಹಕ್ಕುಗಳು, ಭಾರತದಲ್ಲಿ ಆಹಾರ ಭದ್ರತೆ, ಫೆಡರಲಿಸಂ, ಪೌರತ್ವ ಮತ್ತು ಜಾತ್ಯತೀತತೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಶಾಲಾ ಕೋರ್ಸ್ಗಳಿಂದ ಕೈಬಿಟ್ಟಿದೆ.
ಇದಕ್ಕೆ ಪಶ್ಚಿಮಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.
There has been a lot of uninformed commentary on the exclusion of some topics from #CBSESyllabus. The problem with these comments is that they resort to sensationalism by connecting topics selectively to portray a false narrative.
— Dr. Ramesh Pokhriyal Nishank (@DrRPNishank) July 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.