ನವದೆಹಲಿ: ಕೋವಿಡ್ 19 ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯು ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ನೌಕರರ ಭವಿಷ್ಯ ನಿಧಿಗೆ ಮಹತ್ವದ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ನೌಕರರ ಶೇ.12 ಮತ್ತು ಮಾಲೀಕರ ಶೇ.12 ಕೊಡುಗೆ ಸೇರಿ ಒಟ್ಟು ನೌಕರರ ಭವಿಷ್ಯ ನಿಧಿಯ ಶೇ.24 ಕೊಡುಗೆಯನ್ನು ಮುಂದಿನ ಮೂರು ತಿಂಗಳಿಗೆ ಅಂದರೆ ಜೂನ್ ನಿಂದ ಆಗಸ್ಟ್ 2020ರವರೆಗೆ ಸರ್ಕಾರವೇ ಪಾವತಿಸುವ ಪ್ರಸ್ತಾಪಕ್ಕೆ ಅನುಮೋದನೆಯನ್ನು ಬುಧವಾರ ಕೇಂದ್ರ ಸಂಪುಟ ನೀಡಿದೆ.
ಈ ಅನುಮೋದನೆ ಎಪ್ರಿಲ್ 15ರಂದು ಪ್ರಕಟಿಸಿದ ಮಾರ್ಚ್ ನಿಂದ ಮೇ 2020ರ ವೇತನ ತಿಂಗಳುಗಳಿಗೆ ಇರುವ ಯೋಜನೆಗೆ ಹೆಚ್ಚುವರಿಯಾಗಿದೆ. ಇದರ ಒಟ್ಟಾರೆ ಅಂದಾಜು ರೂ. 4,860 ಕೋಟಿ ಆಗಿದೆ. 3.67 ಲಕ್ಷ ಸಂಸ್ಥೆಗಳ 72 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಪ್ರಸ್ತಾಪದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ಜುಲೈ ಮತ್ತು ಆಗಸ್ಟ್ 2020ರ ವೇತನ ಮಾಸದಲ್ಲಿ ಯೋಜನೆಯು 100 ಉದ್ಯೋಗಿಗಳಿಗಿಂತ ಕಡಿಮೆ ಇರುವ ಸಂಸ್ಥೆಗಳ ಮತ್ತು ಅಲ್ಲಿ ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಶೇ.90ರಷ್ಟು ಉದ್ಯೋಗಳಿಗೆ ಅನುಕೂಲವಾಗಲಿದೆ.
2. 3.67 ಲಕ್ಷ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 72.22 ಲಕ್ಷ ಕಾರ್ಮಿಕರಿಗೆ ಇದರಿಂದ ಪ್ರಯೋಜನವಾಗಲಿದ್ದು, ಅವರು ಅಡ್ಡಿಗಳ ನಡುವೆಯೂ ವೇತನಪಟ್ಟಿಯಲ್ಲಿ ಮುಂದುವರಿಯಲಿದ್ದಾರೆ.
3.ಸರ್ಕಾರ 4800 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು 2020-21ನೇ ಸಾಲಿನಲ್ಲಿ ಈ ಉದ್ದೇಶಕ್ಕಾಗಿ ಒದಗಿಸಲಿದೆ.
ಪ್ರಯೋಜನ ಒಂದರ ಮೇಲೊಂದು ಆಗುವುದನ್ನು ತಪ್ಪಿಸಲು ಜೂನ್ ನಿಂದ ಆಗಸ್ಟ್ 2020ರವರೆಗೆ ಶೇ.12ರಷ್ಟು ಮಾಲಿಕರ ವಂತಿಗೆಯನ್ನು ಪ್ರಧಾನಮಂತ್ರಿ ರೋಜ್ಗಾರ್ ಪ್ರೋತ್ಸಾಹ ಯೋಜನೆ (ಪಿಎಂಆರ್.ಪಿ.ವೈ) ಅಡಿ ಪಡೆಯಲು ಅರ್ಹರಾಗಿರುವ ಫಲಾನುಭವಿಗಳನ್ನು ಹೊರಗಿಡಲಾಗಿದೆ.
ದೀರ್ಘಕಾಲೀನ ಲಾಕ್ ಡೌನ್ ನಿಂದಾಗಿ, ವಾಣಿಜ್ಯೋದ್ಯಮಗಳು ಮರಳಿ ತಮ್ಮ ಕಾರ್ಯದತ್ತ ಮರಳಲು ಹಣಕಾಸು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಹಣಕಾಸು ಸಚಿವರು, 13.05.2020ರಂದು ಪ್ರಕಟಿಸಿದ ಆತ್ಮ ನಿರ್ಭರ ಭಾರತದಡಿಯ ಇಪಿಎಫ್ ಬೆಂಬಲವನ್ನು ಮತ್ತೆ ಮೂರು ತಿಂಗಳುಗಳಿಗೆ ಅಂದರೆ ವೇತನ ಮಾಸ ಜೂನ್, ಜುಲೈ ಮತ್ತು ಆಗಸ್ಟ್ 2020ಕ್ಕೆ ವಿಸ್ತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.