ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ಗಂಗಾ ನದಿಯ ಪುನಶ್ಚೇತನ ಯೋಜನೆ ನಮಾಮಿ ಗಂಗಾಗೆ ವಿಶ್ವಬ್ಯಾಂಕ್ ಬೆಂಬಲವನ್ನು ಸೂಚಿಸಿದ್ದು, 400 ಮಿಲಿಯನ್ ಯುಎಸ್ ಡಾಲರ್ ಸಾಲದ ನೆರವು ನೀಡಲು ಮುಂದಾಗಿದೆ.
ಈ ಒಪ್ಪಂದಕ್ಕೆ ಭಾರತದ ಪರವಾಗಿ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಸಮೀರ್ ಕುಮಾರ್ ಖರೆ ಮತ್ತು ವಿಶ್ವಬ್ಯಾಂಕ್ ಪರವಾಗಿ ಆಕ್ಟಿಂಗ್ ಕಂಟ್ರಿ ನಿರ್ದೇಶಕ ಕೈಸರ್ ಖಾನ್ ಸಹಿ ಹಾಕಿದರು.
ಈ ಬಗ್ಗೆ ಪ್ರಕಟಣೆ ನೀಡಿರುವ ವಿಶ್ವಬ್ಯಾಂಕ್, ಎಸ್ಎನ್ಜಿಆರ್ಬಿಪಿ ಯೋಜನೆಯಲ್ಲಿ ಗಂಗಾ ನದಿಯ ಮಾಲಿನ್ಯವನ್ನು ತಡೆಯಲು ಮತ್ತು ನದಿಯ ಸಮೀಪದ ಪ್ರದೇಶಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವ ಭಾರತಕ್ಕೆ ವಿಶ್ವಬ್ಯಾಂಕ್ ಸಹಾಯ ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಮೀರ್ ಕುಮಾರ್ ಖರೆ ಅವರು, ನದಿಗಳನ್ನು ಪುನಶ್ಚೇತನಗೊಳಿಸುವ ಸರ್ಕಾರದ ಕಾರ್ಯಕ್ಕೆ ವಿಶ್ವಬ್ಯಾಂಕ್ ಬೆಂಬಲ ಸೂಚಿಸಿದೆ. ಈ ಒಪ್ಪಂದದಂತೆ 381 ಮಿಲಿಯನ್ ಡಾಲರ್ ಸಾಲ ಒಪ್ಪಂದ ಮತ್ತು 19 ಮಿಲಿಯನ್ ಡಾಲರ್ ವಿಶ್ವಬ್ಯಾಂಕ್ ಖಾತರಿಯನ್ನು ಒಳಗೊಂಡಿದೆ ಎಂದೂ ತಿಳಿಸಿದೆ. ಅಲ್ಲದೆ ನಮಾಮಿ ಗಂಗಾ ಯೋಜನೆಯಡಿ ಒಳಚರಂಡಿ, ಮೂಲ ಸೌಕರ್ಯಗಳ ಅಭಿವೃದ್ಧಿಗೂ ವಿಶ್ವಬ್ಯಾಂಕ್ ಸಹಕಾರ ನೀಡಿದೆ ಎಂದು ತಿಳಿಸಿದೆ. ಈ ಯೋಜನೆ ದೇಶದ ಹಲವಾರು ನದಿಗಳು, ನಗರಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಖರೆ ತಿಳಿಸಿದ್ದಾರೆ.
ಇನ್ನು ಈ ಸಾಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅವರು, 381 ಮಿಲಿಯನ್ ಸಾಲವು 18.5 ವರ್ಷಗಳಲ್ಲಿ ತೀರಿಸುವುದಾಗಿಯೂ ತಿಳಿಸಿದ್ದಾರೆ. 19 ಮಿಲಿಯನ್ ಡಾಲರ್ 18 ವರ್ಷಗಳು ಎಂದು ತಿಳಿಸಿದ್ದಾರೆ. ನಮಾಮಿ ಗಂಗೆ ಯೋಜನೆಯಡಿಯಲ್ಲಿ 2020 ರ ಮಾರ್ಚ್ ವರೆಗೆ ಸುಮಾರು 313 ಯೋಜನೆಗಳಿಗೆ 28,966 ಕೋಟಿ ರೂ. ವೆಚ್ಚದಲ್ಲಿ ಅನುಮತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಯೋಜನೆಯ ಮೂಲಕ ನದಿಯನ್ನು ಸ್ವಚ್ಛ, ಸ್ವಸ್ಥ, ಆರೋಗ್ಯ ಪೂರ್ಣ ಹಾಗೂ ಮಾಲಿನ್ಯ ರಹಿತವನ್ನಾಗಿ ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ನಮಾಮಿ ಗಂಗಾ ಯೋಜನೆಯ ಎರಡನೇ ಹಂತದ ಬಿಡ್ಡಿಂಗ್ ಪ್ರಕ್ರಿಯೆಗಳು ಆರಂಭವಾಗಲಿರುವುದಾಗಿಯೂ ಖರೆ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.