ನವದೆಹಲಿ: ಶ್ರಾವಣ ಮಾಸದ ಪವಿತ್ರ ತಿಂಗಳಲ್ಲಿ ಲಕ್ಷಾಂತರ ಶಿವ ಭಕ್ತರು ದೇಗುಲಗಳಿಗೆ ತೆರಳಿ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಆದರೆ ಈ ಬಾರಿ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿರುವುದರಿಂದ ಧಾರ್ಮಿಕ ಚಟುವಟಿಕೆಗಳು ಕಳೆಗುಂದಿವೆ. ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಗಳಿಗೆ ತೆರಳುವ ಅವಕಾಶವಿಲ್ಲ.
ಈ ಹಿನ್ನಲೆಯಲ್ಲಿ ಅಂಚೆ ಇಲಾಖೆಯು ಮಹತ್ವದ ನಿರ್ಧಾರವನ್ನು ಮಾಡಿದೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ಇರುವ ಪವಿತ್ರ ದೇಗುಲ ಕಾಶಿ ವಿಶ್ವನಾಥದ ಪ್ರಸಾದವನ್ನು ಅಂಚೆ ಮೂಲಕ ಭಕ್ತರ ಮನೆಗೇ ತಂದುಕೊಡಲಿದೆ. ಹೀಗಾಗಿ ಭಕ್ತರಿಗೆ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೂ ಪ್ರಸಾದ ಸಿಗಲಿದೆ.
ಕಾಶಿ ವಿಶ್ವನಾಥ ದೇವಾಲಯದ ಪ್ರಸಾದವನ್ನು ಭಕ್ತರ ಮನೆಗೆ ಕೊಂಡೊಯ್ಯಲು ಅಂಚೆ ಇಲಾಖೆ ಶ್ಲಾಘನೀಯ ಪ್ರಯತ್ನ ಮಾಡಿದೆ. ಈಗ ಭಕ್ತರು ತಮ್ಮ ಮನೆಗಳಿಗೆ ಸ್ಪೀಡ್ ಪೋಸ್ಟ್ ಮೂಲಕ ಪವಿತ್ರ ಪ್ರಸಾದವನ್ನು ಪಡೆಯಬಹುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ಹೇಳಿದ್ದಾರೆ.
ಪ್ರಸಾದ ಪಡೆಯಲು ಯಾವುದೇ ಅಂಚೆ ಕಚೇರಿಯಿಂದ 251 ರೂ.ಗಳ ಎಲೆಕ್ಟ್ರಾನಿಕ್ ಮನಿ ಆರ್ಡರ್ (ಇಎಂಒ) ಅನ್ನು ವಾರಣಾಸಿ ಪೂರ್ವ ವಿಭಾಗದ ಅಂಚೆ ಕಛೇರಿಯ ಸೀನಿಯರ್ ಸೂಪರಿಟೆಂಡೆಂಟ್ಗಳಿಗೆ ಕಳುಹಿಸಬೇಕು.
सावन के शुभ महीने में डाक विभाग ने श्री काशी विश्वनाथ मंदिर के प्रसाद को श्रद्धालुओं के घर तक पहुंचाने का सराहनीय प्रयास किया है। कोरोना के दौर में भी स्पीड पोस्ट के द्वारा बाबा भोलेनाथ के भक्त पवित्र प्रसाद अपने घर पर प्राप्त कर सकते हैं।
जय भोलेनाथ pic.twitter.com/sCCoiGtgqN— Ravi Shankar Prasad (@rsprasad) July 7, 2020
सावन के शुभ महीने में डाक विभाग ने श्री काशी विश्वनाथ मंदिर के प्रसाद को श्रद्धालुओं के घर तक पहुंचाने का सराहनीय प्रयास किया है। कोरोना के दौर में भी स्पीड पोस्ट के द्वारा बाबा भोलेनाथ के भक्त पवित्र प्रसाद अपने घर पर प्राप्त कर सकते हैं।
जय भोलेनाथ pic.twitter.com/sCCoiGtgqN— Ravi Shankar Prasad (@rsprasad) July 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.