ಕೋಲ್ಕತಾ: ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಹ್ಯೂಮನ್ ಟ್ರಯಲ್ಗೆ ಸಿದ್ಧರಾಗಿರುವಂತೆ ಶಾಲಾ ಶಿಕ್ಷಕ ಚಿರಂಜಿತ್ ಧಿಬಾರ್ ಅವರಿಗೆ ಐಸಿಎಂಆರ್ನಿಂದ ಫೋನ್ ಕರೆ ಬಂದಿದೆ. ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಒಡಿಶಾದ ಭುವನೇಶ್ವರದಲ್ಲಿ ಅಥವಾ ಬಿಹಾರದ ಪಾಟ್ನಾದಲ್ಲಿ ಇರುವ ಐಎಂಸಿಆರ್ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಸಕ್ರಿಯ ಆರ್ಎಸ್ಎಸ್ ಸ್ವಯಂಸೇವಕನಾಗಿರುವ ಧಿಬಾರ್ ಅವರು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರದವರು ಎಂದು ವರದಿಗಳು ತಿಳಿಸಿವೆ.
ಪಾಟ್ನಾ ಐಸಿಎಂಆರ್ನ ಅಧಿಕಾರಿಯೊಬ್ಬರು ಭಾನುವಾರ ನನ್ನನ್ನು ಸಂಪರ್ಕಿಸಲಿದ್ದಾರೆ, ಹೀಗಾಗಿ ಕ್ಲಿನಿಕಲ್ ಮಾನವ ಪ್ರಯೋಗವು ಪಾಟ್ನಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
“ನಾನು ಏಪ್ರಿಲ್ನಲ್ಲಿ ಐಸಿಎಂಆರ್ಗೆ ಮನವಿಯನ್ನು ಕಳುಹಿಸಿದ್ದೆ. ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಲು ನಾನು ಬಯಸುತ್ತಿದ್ದೇನೆ ಎಂದು ತಿಳಿಸಿದ್ದೆ. ಅದು ನಮ್ಮ ವಿಶಾಲ ಮಾನವಕುಲದ ಒಳಿತಿಗಾಗಿ ಅಲ್ಪ ಮಟ್ಟಿನ ನನ್ನ ಪ್ರಯತ್ನವಾಗಿದೆ. ಪರೀಕ್ಷೆಗಳು ಮಾನವರ ಮೇಲೆ ಆಗಲೇಬೇಕಿದೆ. ಈ ಅಪಾಯವನ್ನು ಯಾರಾದರೂ ಹೊತ್ತುಕೊಳ್ಳಲೇ ಬೇಕು. ಅದು ನಾನೇ ಯಾಕಾಗಬಾರದು?. ಇದು ರಾಷ್ಟ್ರಕ್ಕೆ ನನ್ನ ಸೇವೆ. ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ, ಯಾವುದೇ ಒತ್ತಡವಿಲ್ಲ”ಎಂದು ಧಿಭಾರ್ ಹೇಳಿದ್ದಾರೆ.
ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಲು ಪಶ್ಚಿಮ ಬಂಗಾಳದ 50 ಕ್ಕೂ ಹೆಚ್ಚು ಜನರು ಐಸಿಎಂಆರ್ಗೆ ಅರ್ಜಿ ಸಲ್ಲಿಸಿದ್ದರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಹಿಂದಕ್ಕೆ ಸ್ಪಂದನೆ ಪಡೆದ ಏಕೈಕ ವ್ಯಕ್ತಿ ದಿಭಾರ್.
ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ದಿಭಾರ್ ಅವರ ತಂದೆ ತಪನ್ ದಿಭಾರ್ ಅವರು, “ಆರಂಭದಲ್ಲಿ ನಾವು ಚಿಂತೆ ಮಾಡುತ್ತಿದ್ದೆವು, ಆದರೆ ರಾಷ್ಟ್ರಕ್ಕಾಗು ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾನೆಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲವೂ ಚೆನ್ನಾಗಿ ಆಗುತ್ತದೆ ಮತ್ತು ರಾಷ್ಟ್ರವು ಶೀಘ್ರದಲ್ಲೇ ಕೋವಿಡ್ ಅನ್ನು ಎದುರಿಸಲು ಲಸಿಕೆ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ CDSCO (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಭಾರತದಲ್ಲಿ ತಯಾರಿಸಿದ ಎರಡು ಕೋವಿಡ್ -19 ಲಸಿಕೆಗಳಿಗೆ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಅದೆಂದರೆ COVAXIN ಮತ್ತು ZyCov-D.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.