ನವದೆಹಲಿ: ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ, ಜಮ್ಮು-ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ಇರುವ ಅಮರನಾಥ ಗುಹಾ ದೇಗುಲದ ಆರತಿಯನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಅಮರನಾಥ ದೇವಾಲಯ ಮಂಡಳಿ ಭಾನುವಾರ ಅಮರನಾಥ ಆರತಿ ಮತ್ತು ದರ್ಶನದ ನೇರ ಪ್ರಸಾರಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿತ್ತು. ದೂರದರ್ಶನ ಚಾನೆಲ್ನಲ್ಲಿ ಇದನ್ನು ನೇರ ಪ್ರಸಾರ ಮಾಡಲಾಗುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಕೋವಿಡ್ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಈ ವರ್ಷ ಅಮರನಾಥ ತೀರ್ಥಯಾತ್ರೆಗೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ.
ಜಮ್ಮುವಿನಿಂದ 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹೆ ದೇವಾಲಯ ಅಮರನಾಥಕ್ಕೆ ರಸ್ತೆ ಮೂಲಕ ದಿನಕ್ಕೆ 500 ಯಾತ್ರಾರ್ಥಿಗಳು ಮಾತ್ರ ಯಾತ್ರೆ ಕೈಗೊಳ್ಳಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಹೇಳಿದೆ, ಈ ತಿಂಗಳ ಕೊನೆಯಲ್ಲಿ ಎರಡು ವಾರಗಳವರೆಗೆ ಬಾಲ್ಟಾಲ್ ಟ್ರ್ಯಾಕ್ನಿಂದ ಯಾತ್ರೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಜೂನ್ 23 ರಂದು ಅನಂತ್ನಾಗ್ನ ಪಹಲ್ಗಮ್ ಮತ್ತು ಗ್ಯಾಂಡರ್ಬಾಲ್ನ ಬಾಲ್ಟಾಲ್ ಅವಳಿ ಮಾರ್ಗಗಳಿಂದ ಯಾತ್ರೆ ಪ್ರಾರಂಭವಾಗಬೇಕಿತ್ತು ಆದರೆ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡಿದ ಕಾರಣದಿಂದಾಗಿ ಇದು ವಿಳಂಬವಾಯಿತು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ಅವರು ಭಾನುವಾರ ಬೆಳಿಗ್ಗೆ ಆಷಾಢ ಪೂರ್ಣಿಮೆಯ ಅಂಗವಾಗಿ ಅಮರನಾಥನಿಗೆ ಪ್ರಥವ ಆರತಿಯನ್ನು ಬೆಳಗಿದರು.
ಶ್ರಾವಣ ಮಾಸದ ಮೊದಲ ಸೋಮವಾರವಾದ ಇಂದು ಭಕ್ತರು ಮುಂಜಾನೆಯಿಂದಲೇ ದೇಶದ ವಿವಿಧ ಭಾಗಗಳಲ್ಲಿನ ಶಿವ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.